ಆಯೋಜಕರಿಗೆ ಆಯುಕ್ತರು ತರಾಟೆ

ಆಯೋಜಕರಿಗೆ ಆಯುಕ್ತರು ತರಾಟೆ

ಬೆಂಗಳೂರು, ಫೆ.22 : ಪ್ರತಿಭಟನ ಕಾರರಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ರೆ ಸಹಿಸುವುದಿಲ್ಲ.
ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಸಹಿಸಲು ಸಾಧ್ಯವಿಲ್ಲ. ನಾವು ಪ್ರತಿಭಟನೆಗಳಿಗೆ ಅವಕಾಶ ನೀಡುತ್ತಲೇ ಇದ್ದೇವೆ. ಇದುವರೆಗೂ ಯಾವುದೇ ಪ್ರತಿಭಟನೆಯಲ್ಲಿಯೂ ಈ ರೀತಿಯಾಗಿ ಆಗಿರಲಿಲ್ಲ. ಮಾಡುವುದೆಲ್ಲವನ್ನು ಮಾಡಿ ಏನು ಮಾಡಿಲ್ಲ ಎಂದು ನಾಟಕ ಮಾಡುವುದು ಸರಿಯಲ್ಲ ಎಂದು ಕಾರ್ಯಕ್ರಮ ಆಯೋಜಕರಿಗೆ ಆಯುಕ್ತರು ತರಾಟೆಗೆ ತೆಗೆದುಕೊಂಡರು.

Related