ಪಕ್ಷದವರಿಂದಲೇ ಸಿಎಂ ಬೆನ್ನಿಗೆ ಚೂರಿ : ಶಾಸಕಿ

ಪಕ್ಷದವರಿಂದಲೇ ಸಿಎಂ ಬೆನ್ನಿಗೆ ಚೂರಿ : ಶಾಸಕಿ

ಬೆಳಗಾವಿ : ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಇದು ಬಿಜೆಪಿಯ ಆಂತರಿಕ ವಿಚಾರವಾಗಿದ್ದು, ನಾನೇನು ಮಾತನಾಡಲ್ಲ ಎಂದರು. ಆದರೆ ಕಳೆದ ಆರು ತಿಂಗಳಿನಿಂದ ಸರ್ಕಾರದ ಕಾರ್ಯಕ್ರಮಗಳು ಕುಂಠಿತಗೊಂಡಿವೆ. ಕೊರೊನಾ ಆದ್ಮೇಲೆ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿದೆ. ಇವರು ದೆಹಲಿಗೆ ಹೋದ್ರು, ಅವರು ದೆಹಲಿಗೆ ಹೋದರು ಎಂಬ ಮಾತುಗಳೇ ಕೇಳಿ ಬರುತ್ತಿವೆ. ಹೀಗಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಮಂತ್ರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತರು ಪೂರ್ಣಾವಧಿ ಸರ್ಕಾರ ನಡೆಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನಗೇನೋ ಹಾಗೆ ಅನಿಸಿಲ್ಲ. ಸಮಯ ಸಂದರ್ಭಕ್ಕನುಗುಣವಾಗಿ ಅವಧಿ ಪೂರ್ವಗೊಳಿಸಿಲ್ಲ ಎಂದ ಅವರು, ಯಡಿಯೂರಪ್ಪನವರ ಬೆನ್ನಿಗೆ ಅವರ ಪಕ್ಷದವರೇ ಚೂರಿ ಹಾಕಿದ್ದಾರೆ.

ಇನ್ನೇನು ಕಾಂಗ್ರೆಸ್‌ನವರಾದ ನಾವು ಚೂರಿ ಹಾಕಲು ಸಾಧ್ಯನಾ..? ಎಂದು ಪ್ರಶ್ನಿಸಿದರು ಯಡಿಯೂರಪ್ಪನವರು ಯಾರನ್ನ ಬೆಳೆಸಿದರು, ಅವರೇ ಇಂದು ಸಿಎಂ ಸ್ಥಾನದಿಂದ ಕೆಳಗಿಳಿಸಲು ಹೊರಟಿದ್ದಾರೆ ಎಂದರು.

Related