ಸಿಎಂ ಅಂಜಿ, ಅಳುಕಿದ : ವಾಟಾಳ್ ವಾಗ್ಧಾಳಿ

ಸಿಎಂ ಅಂಜಿ, ಅಳುಕಿದ : ವಾಟಾಳ್ ವಾಗ್ಧಾಳಿ

ಮೈಸೂರು : ಮುಖ್ಯಮಂತ್ರಿ ಯಡಿಯೂರಪ್ಪ ಅಆ ಗೆ ಹೆದರುವವರಲ್ಲ. ಆದರೆ ಈ ಬಾರಿ ಅಂಜಿದಂತೆ, ಅಳುಕಿದಂತೆ ಕಾಣುತ್ತಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ಬ್ಲ್ಯಾಕ್‌ಮೇಲ್ ಆರೋಪ ವಿಚಾರವಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇರ ಹೊಣೆಯಾಗಿದ್ದು, ಸಿಎಂ ಸ್ಥಾನಕ್ಕೆ ಅವರು, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇಡೀ ರಾಜ್ಯ ತಲೆ ತಗ್ಗಿಸುವಂಥ ವಿಚಾರ. ಬ್ಲ್ಯಾಕ್‌ಮೇಲ್ ಮಾಡಿ ಮಂತ್ರಿ ಸ್ಥಾನ ಪಡೆದಿರೋದು ಅಕ್ಷಮ್ಯ ಅಪರಾಧ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದರು.

Related