ಭಿಕ್ಷಾಟನೆಗೆ ಮಕ್ಕಳು : ಕಣ್ಮುಚ್ಚಿ ಕುಳಿತ ಸರ್ಕಾರ

ಭಿಕ್ಷಾಟನೆಗೆ ಮಕ್ಕಳು : ಕಣ್ಮುಚ್ಚಿ ಕುಳಿತ ಸರ್ಕಾರ

ಗಂಗಾವತಿ :  ರಾಜ್ಯದಲ್ಲಿ ಕೋವಿಡ್ ರೋಗ ವ್ಯಾಪಕವಾಗಿ ಹರಡುತ್ತಿದ್ದು ಸಾವುಗಳ ಸಂಖ್ಯೆ ಹೆಚ್ಚಳವಾಗುವ ಸಂದರ್ಭದಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ.

ಹೊಟೇಲ್, ಪಾರ್ಕ್, ದೇಗುಲ, ನ್ಯಾಯಾಲಯ, ಆಸ್ಪತ್ರೆ ಸೇರಿ ಪ್ರಮುಖ ಸ್ಥಳಗಳಲ್ಲಿ ಆಗಮಿಸುವ ಜನರ ಹತ್ತಿರ ಭಿಕ್ಷೆ ಬೇಡುತ್ತಾರೆ. ಕೋವಿಡ್ ಭಯ ಈ ಭಿಕ್ಷೆ ಬೇಡುವ ಮಕ್ಕಳು ಮಹಿಳೆಯರಿಗೆ ಇಲ್ಲವಾಗಿದೆ.

ಭಿಕ್ಷಾಟನೆ ಸಂಪೂರ್ಣವಾಗಿ ನಿಷೇಧ ಮಾಡಲು ಈಗಾಗಲೇ ಕಾನೂನುಗಳಿದ್ದರೂ ನಿಯಮ ಗಾಳಿಗೆ ತೂರಿ ನಿತ್ಯವೂ ತಾಲ್ಲೂಕಿನ ಗ್ರಾಮೀಣ ಭಾಗದಿಂದ ಆಗಮಿಸಿ ಇಡೀ ದಿನ ಭಿಕ್ಷಾಟನೆ ಮಾಡಿ ಸಂಜೆ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ನಾಗರೀಕ ಸಮಾಜದಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟಲು ಸರ್ಕಾರ ಕ್ರಮವಹಿಸಬೇಕಿದೆ.

Related