ಉಪಚುನಾವಣೆ : ಪ್ರಚಾರದಲ್ಲಿ ‘ಡಿ’ ಬಾಸ್ ಹವಾ

ಉಪಚುನಾವಣೆ : ಪ್ರಚಾರದಲ್ಲಿ ‘ಡಿ’ ಬಾಸ್ ಹವಾ

ಬೆಂಗಳೂರು : ಆರ್ ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ಸ್ಟಾರ್ ಗಳ ಹವಾ ಶುರುವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಖಷ್ಬೂ ನಂತರ ಚಾಲೆಂಜಿAಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದರು.

ದರ್ಶನ್ ತೆರೆದ ವಾಹನದಲ್ಲಿ ಹಲವು ಸ್ಥಳಗಳಲ್ಲಿ ಪ್ರಚಾರ ನಡೆಸಿದ ದರ್ಶನ್ ನೋಡಲು ಅಭಿಮಾನಿಗಳು ಮತ್ತು ಬೆಂಬಲಿಗರು ಮುಗಿ ಬಿದ್ದಿದ್ದರು. ಶುಕ್ರವಾರ ಈದ್ ಮಿಲಾದ್ ರಜೆ ಇದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

2011ರಲ್ಲಿ ದರ್ಶನ್ ಬಾಸ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ದಾರಿಯುದ್ದಕ್ಕೂ ಬಾಸ್ ಬಾಸ್ ಎಂಬ ಘೋಷಣೆ ಕೇಳುತ್ತಿದ್ದವು, ಮಹಿಳೆಯರು ಮಂಗಳಾರತಿ ಎತ್ತಿದರು, ಹಲವು ಮಂದಿ ಹೂಮಳೆ ಸುರಿಸಿದರು.

ಮುನಿರತ್ನ ಪರ ದರ್ಶನ್ ಪ್ರಚಾರಕ್ಕಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಜಾತಿ ರಾಜಕಾರಣದ ಬಗ್ಗೆ ಮಾತನಾಡಲು ಆರಂಭಿಸಿದರು. ಬಲಿಜ ಕಾಪು ಜನಾಂಗದ ದರ್ಶನ್ ನಾಯ್ಡು ಸಮುದಾಯದ ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದು ನಾಯ್ಡು ಮತ್ತು ಒಕ್ಕಲಿಗರ ನಡುವಿನ ಹೋರಾಟ ಎಂಬಂತೆ ಬಿಂಬಿಸಿದರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರಾಗಿದ್ದು, ಸ್ಥಳೀಯರಾಗಿದ್ದಾರೆ.

Related