ಬೆಂಕಿಗೆ ಮನೆ ಸುಟ್ಟು ಭಸ್ಮ

ಬೆಂಕಿಗೆ ಮನೆ ಸುಟ್ಟು ಭಸ್ಮ

ತುರುವೇಕೆರೆ, ಫೆ. 19: ಆಕಸ್ಮಿಕ ಬೆಂಕಿ ತಗಲಿ ಮನೆಯೊಂದು ಸುಟ್ಟು ಹೋದ ಘಟನೆಯೊಂದು ತಾಲ್ಲೂಕಿನ ಕಣತೂರುಮೇಲನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ರೈತ ಕುಮಾರ ಸ್ವಾಮಿ ಎಂಬುವರ ಹೆಂಚಿನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗುಲಿ  ಉರಿಯಲಾರಂಬಿಸಿದೆ. ಗ್ರಾಮಸ್ಥರು ಕೂಡಲೇ ಆಗ್ನಿ ಶಾಮಕ ದಳದವರಿಗೆ ತಿಳಿಸಿದ್ದಾರೆ. ಬೆಂಕಿ ನಂದಿಸಲು ಆಗಮಿಸಿದ ಅಗ್ನಿಶಾಮಕ ದಳದ ವಾಹನದಲ್ಲಿ ನೀರು ಖಾಲಿಯಾಗಿದೆ. ನಂತರ ಮತ್ತೆರಡು ವಾಹನ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ಅಪಾರ ಪ್ರಮಾಣದ ಕೊಬ್ಬರಿ, ಮನೆ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂ. ನಷ್ಟ ಸಂಬವಿಸಿದೆ.

Related