ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ!

ಬಾವಿಗೆ ಹಾರಿ ಸಹೋದರರು ಆತ್ಮಹತ್ಯೆ!

ಕಲಬುರಗಿ : ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಅಣ್ಣ-ತಮ್ಮ ಇಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು. ಈ ದುರ್ಘಟನೆ ನಡೆದಿದೆ.

ಸಹೋದರರಾದ ಸುನೀಲ್ (17) ಮತ್ತು ಶೇಖರ್(12) ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಯಲ್ಲಿ ತಂದೆ-ತಾಯಿಯೊಂದಿಗೆ  ಜಗಳ ಮಾಡಿಕೊಂಡಿದ್ದ ಸಹೋದರರು ಬಳಿಕ ಕೃಷಿ ಜಮೀನಿನ ಬಳಿ ಬಳಿ ಬಂದು ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿದ್ದಾರೆ. ಇವರಿಬ್ಬರಿಗೂ ಈಜು ಬರುತಿತ್ತು. ಹಾಗಾಗಿ ಕಲ್ಲು ಕಟ್ಟಿಕೊಂಡು ಸಾವಿನ ಮನೆಯ ಕದ ತಟ್ಟಿದ್ದಾರೆ.

ರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related