ನಗರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ!

ನಗರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ!

ಬಾದಾಮಿ : ಭಾರತ ಬಂದ್ ಕರೆಗೆ ಒಗೊಟ್ಟು ಬಾದಾಮಿ ನಗರದಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಲಾಯಿತು. ಈ ವೇಳೆ ತಹಶೀಲ್ದಾರ ಸುಹಾಸ ಇಂಗಳೆ ಅವರಿಗೆ ಮನವಿ ಅರ್ಪಿಸಿದರು. ಉತ್ತರ ಕರ್ನಾಟಕ ರೈತ ಸಂಘ, ಹಸಿರು ಸೇನೆ, ಜೈ ಕರ್ನಾಟಕ ರಕ್ಷಣಾ ಸೇನೆ ನೇತ್ರತ್ವದಲ್ಲಿ ಜರುಗಿತ್ತು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಬರಗುಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಣ್ಣ ಯಲಿಗಾರ, ರೈತ ಮುಖಂಡ ವಿ.ಎಸ್ ಕುಲಕರ್ಣಿ, ಜೈ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಹೇಶ ವಡ್ಡರ, ಉಪಾಧ್ಯಕ್ಷ ರಮೇಶ ಬೀಳಗಿ, ವಸಂತ ಜಡಿಯನ್ನವರ, ಗುತ್ತಿಗೆದಾರ ಸಂಘದ ಮಾಜಿ ತಾಲೂಕಾಧ್ಯಕ್ಷ ರೇವಣಸಿದ್ದಪ್ಪ ನೋಟಗಾರ ಇದ್ದರು.

Related