ಐತಿಹಾಸಿಕ ಗೋಲ್ ಗುಂಬಜ್ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಕರೆ

ಐತಿಹಾಸಿಕ ಗೋಲ್ ಗುಂಬಜ್ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಕರೆ

ವಿಜಯಪುರ: ರಾಜ್ಯದಲ್ಲಿ ಇತ್ತೀಚೆಗೆ ಬಾಂಬೆ ಬೆದರಿಕೆಯ ಕರೆಗಳು ಹೆಚ್ಚಾಗಿ ಬರುತ್ತಿರುವುದರಿಂದ ರಾಜ್ಯದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಹೌದು, ನಿನ್ನೆ ಜನವರಿ ಐದನೇ ತಾರೀಕು ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್  ಇಡಲಾಗಿದೆ ಎಂದು ಕರೆ ಬಂದಿತ್ತು. ಇದಾದ ನಂತರ ಇಂದು ಐತಿಹಾಸಿಕ ಗೋಲ್ ಗುಂಬಜ್ ಗೆ ಬಾಂಬ್ ಇಡಲಾಗಿದೆ ಎಂದು ಮತ್ತೆ ಕರೆ ಬಂದಿದೆ ಇದರಿಂದ ರಾಜ್ಯದಲ್ಲಿರುವ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಇ-ಮೇಲ್ ನಲ್ಲಿ ವಸ್ತುಸಂಗ್ರಹಾಲಯದೊಳಗೆ ಬಾಂಬ್ ಇಡಲಾಗಿದೆ ಎಂದು ಬರೆಯಲಾಗಿದೆ. ಬೆದರಿಕೆ ಬರುತ್ತಿದ್ದಂತೆಯೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ತಲುಪಿಸಿದ್ದು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಂಬ್ ಪತ್ತೆ ದಳದೊಂದಿಗೆ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಆದರೂ ಅದು ಯಾರೋ ದುಷ್ಕರ್ಮಿಗಳು ಕಳುಹಿಸಿದ್ದ ಹುಸಿ ಮೇಲ್ ಎಂಬುದು ನಂತರ ತಿಳಿದುಬಂದಿದೆ.

 

Related