ರಕ್ತದಾನ ಅಭಾವ ತಡೆ- ವಿ. ನರಸಿಂಹಯ್ಯ

ರಕ್ತದಾನ ಅಭಾವ ತಡೆ- ವಿ. ನರಸಿಂಹಯ್ಯ

ದಾಸರಹಳ್ಳಿ: ಮಾನವ ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣು ತುಂಬಾ ಶ್ರೇಷ್ಠವಾದ ಅಂಗಾಂಗವಾಗಿದ್ದು ಎಚ್ಚರವಾಗಿ ಕಾಪಾಡಿಕೊಳ್ಳಬೇಕು, ಧಾರ್ಮಿಕ ಚೇತನ ಜನಪರ ಸೇವಾ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ, ಕಣ್ಣು ತಪಾಸಣೆ, ಆರೋಗ್ಯ ತಪಾಸಣೆ, ಮುಂತಾದ ಶಿಬಿರಗಳನ್ನು ಭಾನುವಾರ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ವಿ. ನರಸಿಂಹಯ್ಯ ತಿಳಿಸಿದರು.
ಈ ವೇಳೆ ಟ್ರಸ್ಟ್ ನ ಅಧ್ಯಕ್ಷ ವಿ. ನರಸಿಂಹಯ್ಯ ಮಾತನಾಡಿ, ಪ್ರತಿ ವರ್ಷವೂ ಸಹ ಆರೋಗ್ಯ ಶಿಬಿರ ರಕ್ತದಾನ ಶಿಬಿರವನ್ನು ಆಯೋಜಿಸಿ ಬಡಜನರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಟ್ರಸ್ಟ್ ಮೂಲಕ ಕಣ್ಣಿನ ಚಿಕಿತ್ಸೆಗಳನ್ನು ಮಾಡಿಸಲಾಗಿದೆ. ನಮ್ಮ ಭಾಗದಲ್ಲಿ ಅನೇಕರು ಕಣ್ಣಿನ ಸಮಸ್ಯೆಗಳಿಗೆ ಒಳಪಟ್ಟಿದ್ದಾರೆ. ಅಂತವರಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಲಾಗುತ್ತಿದೆ. ಕೊರೋನಾದಿಂದ ಮುಂದಿನ ದಿನಗಳಲ್ಲಿ ರಕ್ತದ ಅಭಾವ ಬರಬಾರದೆಂದು ರಕ್ತದಾನವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಟ್ರಸ್ಟ್ ನ ಉಪಾಧ್ಯಕ್ಷ ಶಿವಕುಮಾರ್, ಗೌರವಾಧ್ಯಕ್ಷ ರೇವಣ್ಣ, ಪದಾಧಿಕಾರಿಗಳಾದ ಲಕ್ಷ್ಮಣ, ರಾಜು, ಹರಿಕುಮಾರ್, ಆಶಾ, ಪದ್ಮ ಮುಂತಾದವರಿದ್ದರು.

Related