ಬಿಜೆಪಿಯವರು ಕ್ರಿಮಿನಲ್‌ಗಳಿಗೋಸ್ಕರ ಬೀದಿಗಿದು ಪ್ರತಿಭಟನೆ ಮಾಡ್ತಾರೆ: ಪ್ರಿಯಾಂಕ್ ಖರ್ಗೆ

ಬಿಜೆಪಿಯವರು ಕ್ರಿಮಿನಲ್‌ಗಳಿಗೋಸ್ಕರ ಬೀದಿಗಿದು ಪ್ರತಿಭಟನೆ ಮಾಡ್ತಾರೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಮಮಂದಿರ ಉದ್ಘಾಟನೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವೆ ಸೃಷ್ಟಿಯಾಗಿದೆ.

ಹೌದು, ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಲಾಗಿದ್ದು ರಾಜ್ಯ ಬಿಜೆಪಿ ನಾಯಕರು ಬಂಧನಕೊಳಗಾದ ಶ್ರೀಕಾಂತ ಬಿಡುಗಡೆ ಮಾಡಬೇಕೆಂದು ರಾಜ್ಯದಾದ್ಯಂತ ಪ್ರತಿಭಟನೆ ಮಾಡಿದ್ದರು. ನಾನು ಕೂಡ ಕರೆಸೇವಕ ನನ್ನನ್ನು ಬಂಧಿಸಿ ಎಂಬ ಅಭಿಯಾನದ ಮೂಲಕ ರಾಜ್ಯದಾದ್ಯಂತ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರು.

ಇನ್ನು ಈ ಸಂಬಂಧಪಟ್ಟ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜೂಜು ಆಡೋರು, ಮಟ್ಕಾ ಬುಕ್ಕಿ, ಅಕ್ಕಿ ಕಳ್ಳರು ರಾಮ ಭಕ್ತರಾ? ಯಾರು ರಾಮ ಭಕ್ತರು? 16 ಕೇಸ್ ಇರೋನು ರಾಮ ಭಕ್ತನಾ? ಅಕ್ಕಿ ಕಳ್ಳ ರಾಮ ಭಕ್ತನಾ? ಎಂದು ಪ್ರಶ್ನಿಸುವ ಮೂಲಕ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮಟ್ಕಾ ಬುಕ್ಕಿ, ಅಕ್ಕಿ ಕಳ್ಳನಿಗೋಸ್ಕರ ಪ್ರತಿಭಟನೆ‌ ಮಾಡ್ತಿರಾ? ಕಳೆದ ಆರು ತಿಂಗಳಿಂದ ಬಿಜೆಪಿಯವರು ಯಾರಿಗೋಸ್ಕರ ಹೋರಾಟ ಮಾಡ್ತಿದ್ದೀರಾ? ರೈತರ ಪರ ಬೀದಿಗಿಳಿದಿಲ್ಲ, ಕ‌ನ್ನಡಿಗರಿಗೋಸ್ಕರ ಬೀದಿಗಿಳಿದಿಲ್ಲ, ಮಹಿಳೆಯರಿಗೋಸ್ಕರ ಬೀದಿಗಿಳಿದಿಲ್ಲ? ಇಂತಹ ಕ್ರಿಮಿನಲ್‌ಗಳಿಗೋಸ್ಕರ ಬೀದಿಗಿಳೀತೀರಾ? ಇಷ್ಟು ದಿನ ಇವರ ಮೇಲೆ ಕೇಸ್ ಹಾಕಿದವರು ಯಾರ್ರೀ? ಲಾಂಗ್ ಪೆಂಡಿಂಗ್ ಕೇಸ್ ಯಾಕೆ ಮುಗಿಸಿಲ್ಲ? ಅವಾಗೇನು ಕತ್ತೆ ಕಾಯ್ತಿದ್ರಾ? ಎಂದು ಪ್ರಶ್ನಿಸಿದರು.

ಮಣಿಕಂಠ, ಶ್ರಿಕಾಂತ, ದತ್ತ ಮಾಲಾ ಕೇಸ್ ನಿಮ್ಮ ಅವಧಿಯಲ್ಲೇ ಆಗಿದ್ದು. ಕೇಸರಿ ಶಾಲು ಹಾಕಿದ ತಕ್ಷಣವೇ ಎಲ್ಲಾ ಕೇಸ್ ಮಾಫ್ ಮಾಡಬೇಕಾ? ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಸರಿ ಶಾಲು ಹಾಕಿ ಕಾನೂನು ಬಾಹಿರ ಕೆಲಸ ಮಾಡಿದ್ರೆ ಬಿಡಬೇಕಾ? ಇವಾಗ ನಾನು ರಾಮ ಭಕ್ತ, ಅರೆಸ್ಟ್ ಮಾಡಿ ಅಂತ ಪ್ರತಿಭಟನೆ ಮಾಡ್ತಿದ್ದಾರೆ? ಇವರು ಕಾನೂನು ಮೀರಿ ಹೋಗ್ಲಿ, ಆಗ ಇವರನ್ನು ಅರೆಸ್ಟ್ ಮಾಡ್ತೀವಿ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

 

Related