ಸಿಂದಗಿಯಲ್ಲಿ ಯಡಿಯೂರಪ್ಪ ಸರ್ಕಾರದ ಸಾಧನೆ ಪರಿಚಯಿಸಿದ ಬಿಜೆಪಿ

ಸಿಂದಗಿಯಲ್ಲಿ ಯಡಿಯೂರಪ್ಪ ಸರ್ಕಾರದ ಸಾಧನೆ ಪರಿಚಯಿಸಿದ ಬಿಜೆಪಿ

ಇಂದು ಸಿಂದಗಿ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲದ ವತಿಯಿಂದ ಮಾಜಿ ಶಾಸಕ ರಮೇಶ ಬಾ ಭೂಸನೂರ ನೇತೃತ್ವ ದಲ್ಲಿ ನಡೆದ ಸಿಎಂ ಯಡಿಯೂರಪ್ಪನವರ BJP ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದರು.

ಯಡ್ಯೂರಪ್ಪನವರ ಸರ್ಕಾರದ ಹಲವಾರು ಯೋಜನೆಯನ್ನು ಕರ್ನಾಟಕದ ಎಲ್ಲಾ ಜನತೆಗೂ ತಲಿಪಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ  ಸಾಧನಾ ಕರಪತ್ರವನ್ನು ನಗರದ ಸ್ವಾಮಿ ವಿವೇಕಾನಂದರ ವೃತ್ತದಿಂದ ಹಳೆ ಬಜಾರ ಮಾರ್ಗವಾಗಿ ಸಿಂದಗಿ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಹಂಚಲಾಯಿತು.

ಈ ಸಂದರ್ಭ ದಲ್ಲಿ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ,  ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ ಪಕ್ಷದ ಹಿರಿಯರಾದ ಅಶೋಕ ಅಲ್ಲಾಪೂರ, ಎಮ್ ಎಸ್ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಬಿ ಎಚ್ ಬಿರಾದಾರ, ಎಸ್ ಎಮ್ ಮಠ, ಗುರು ತಳವಾರ ಮತ್ತು ನಿಂಗಣ್ಣ ಬಗಲಿ, ಬಸು ಸಜ್ಜನ, ಸುದರ್ಶನ ಜಿಂಗಾಣಿ,ಶ್ರೀಶೈಲಗೌಡ ಬಿರಾದಾರ, ಪ್ರದೀಪ ದೇಶಪಾಂಡೆ, ರವಿ ಬಿರಾದಾರ, ಸತೀಶ ಬಿರಾದಾರ, ಶಿವರಾಜ ಗಿರಿಗೌಡರ, ರಾಜು ಗೌಂಡಿ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸಿದ್ದು ಪೂಜಾರಿ, ಮಂಜುನಾಥ ಬಜಂತ್ರಿ ಸಿದ್ದಲಿಂಗಯ್ಯ ಹಿರೇಮಠ, ಯಲ್ಲು ಇಂಗಳಗಿ, ರಾಜಕುಮಾರ ಭಾಸಗಿ. ಮಾಧ್ಯಮ ಪ್ರಮುಖ ಶ್ರೀಮಂತ ಪಾಟೀಲ, ಚಂದ್ರಶೇಖರ ಅಮಲಿಹಾಳ,  ಮಹಿಳಾ ಮೋರ್ಚಾಅಧ್ಯಕ್ಷರಾದ  ಸುನಂದಾ ಯಂಪೂರೆ, ಶಾರದಾ ಮಂಗಳೂರು, ಅನುಸುಯಾ ಪಾರಗೊಂಡ, ಶೈಲಜಾ ಸ್ಥಾವರಮಠ, ಅಂಬಿಕಾ ತಳವಾರ,  ನಾಗನಗೌಡ ಪಾಟೀಲ, ಯಲ್ಲಾಲಿಂಗ ಮಳ್ಳಿ ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.

Related