ಹುಟ್ಟುಹಬ್ಬದಂದೇ ಕಾವೇರಿ ನಿವಾಸ ಪ್ರವೇಶಿಸಲು ಸಿಎಂ ಸಿದ್ಧತೆ

ಹುಟ್ಟುಹಬ್ಬದಂದೇ ಕಾವೇರಿ ನಿವಾಸ ಪ್ರವೇಶಿಸಲು ಸಿಎಂ ಸಿದ್ಧತೆ

ಬೆಂಗಳೂರು, ಫೆ.23 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರದಲ್ಲೇ ಕಾವೇರಿ ನಿವಾಸಕ್ಕೆ ಅಧಿಕೃತವಾಗಿ ಪ್ರವೇಶ ಮಾಡಲಿದ್ದಾರೆ. ತಮ್ಮ 78ನೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಿರುವ ಕಾವೇರಿ ನಿವಾಸಕ್ಕೆ ವಿದ್ಯುಕ್ತವಾಗಿ ಪ್ರವೇಶ ಮಾಡಲಿದ್ದಾರೆ.
ಈವರೆಗೂ ಕಾವೇರಿ ನಿವಾಸದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದರು. ಇದೀಗ ಅವರು ಗಾಂಧಿಭವನದ ಬಳಿ ಇರುವ ಸರ್ಕಾರಿ ಬಂಗಲೆಗೆ ತೆರಳಿದ್ದಾರೆ. ನಿನ್ನೆ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರು ಕಾವೇರಿ ನಿವಾಸಕ್ಕೆ ಆಗಮಿಸಿದ್ದರು. ವಾಸ್ತು ಪ್ರಕಾರವೇ ಕಾವೇರಿ ನಿವಾಸವನ್ನು ನವೀಕರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ.

Related