ಸಹಾಯಧನ ಪಡೆದ ರಾಜ್ಯದ ‘ರೈತರಿಗೆ ಬಿಗ್ ಶಾಕ್’

ಸಹಾಯಧನ ಪಡೆದ ರಾಜ್ಯದ ‘ರೈತರಿಗೆ ಬಿಗ್ ಶಾಕ್’

ಬೆಂಗಳೂರು : ರಾಜ್ಯದ ಅನೇಕ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಸಹಾಯಧನ ಪಡೆಯಲು, ಸುಳ್ಳು ಮಾಹಿತಿ ನೀಡಿದ್ದಾರೆ. ಇಂತಹ ರೈತರ ಬಗ್ಗೆ ಮಾಹಿತಿ ಕಲೆ ಹಾಕಿರುವಂತ ರಾಜ್ಯ ಕೃಷಿ ಇಲಾಖೆ, ಸುಳ್ಳು ಮಾಹಿತಿ ನೀಡಿ, ಯೋಜನೆಯಿಂದ ಸಹಾಯ ಧನ ಪಡೆದಂತ ರೈತರಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ ಜಾರಿಮಾಡಿದೆ.

ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಸಹಾಯಧನ ಪಡೆಯಲು ಈಗಾಗಲೇ ಆದಾಯ ತೆರಿಗೆ ಪಾವತಿಸುತ್ತಿರುವಂತ ರೈತರು ಸುಳ್ಳ ಮಾಹಿತಿ ನೀಡಿ, ಯೋಜನೆಯಿಂದ ಸಹಾಯ ಧನ ಪಡೆದಿದ್ದಾರಂತೆ. ಈ ಮೂಲಕ 85,208 ರೈತರು ಸಹಾಯಧನ ಪಡೆದು ವಂಚಿಸಿರುವುದನ್ನು ಕೃಷಿ ಇಲಾಖೆ ಪತ್ತೆ ಹಚ್ಚಿದೆ.

ಹೀಗೆ ಪರಿಶೀಲನೆ ನಡೆಸಿದಂತ ವೇಳೆಯಲ್ಲಿ ರಾಜ್ಯದ 85,208 ರೈತರು ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಸಹಾಯಧನ ಪಡೆದಿರುವುದು ಪತ್ತೆಯಾಗಿದೆ. ಹೀಗಾಗಿ ಜಿಲ್ಲಾ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಹೀಗೆ ವಂಚಿಸಿ, ಸಹಾಯಧನ ಪಡೆದಂತ ರೈತರಿಂದ ಸಹಾಯ ಧನ ವಸೂಲಿಗೆ ಮುಂದಾಗಿದೆ.

ಡಿಮಾಂಡ್  ಡ್ರಾಫ್ಟ್  ಡಿಡಿ ಮೂಲಕ ಸಹಾಯಕ ನಿರ್ದೇಶಕರ ಕಚೇರಿಗೆ  ಸಹಾಯಧನ  ಹಿಂದಿರುಗಿಸುವಂತೆ ವಂಚಿಸಿ, ಸಹಾಯಧನ ಪಡೆದಂತ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಮೂಲಕ ಬಿಗ್ ಶಾಕ್ ನೀಡಲಾಗಿದೆ.

Related