ಅನಧಿಕೃತ ಜಾಹೀರಾತುಗಳ ಬಗ್ಗೆ ಎಚ್ಚರ

ಅನಧಿಕೃತ ಜಾಹೀರಾತುಗಳ ಬಗ್ಗೆ ಎಚ್ಚರ

ಬೆಂಗಳೂರು : ಪಶುಸಂಗೋಪನಾ ಕಾರ್ಯಕರ್ತ ಹುದ್ದೆಗೆ ಜಾಹಿರಾತು ಪ್ರಕಟವಾಗಿದ್ದು, ಸದರಿ ಸಂಸ್ಥೆಗೂ, ಅದರ ಜಾಹೀರಾತಿಗೂ, ಪಶುವೈದ್ಯಕೀಯ ಸೇವಾ ಇಲಾಖೆಗೆ ಯಾವುದೇ ಸಂಬಂಧವಿರುವುದಿಲ್ಲ ಎಂದು ನಿರ್ದೇಶಕ ಡಾ.ಮಂಜುನಾಥ್ ಎಸ್ ಪಾಳೇಗಾರ್ ಸೋಮವಾರ ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ “ಗ್ರಾಮೀಣ ಪಶು ಸಂಗೋಪನಾ ನಿಗಮ ನಿಯಮಿತ” ಎಂಬ ಸಂಸ್ಥೆಯ ವತಿಯಿಂದ ಪಶುಸಂಗೋಪನಾ ಕಾರ್ಯಕರ್ತ ಹುದ್ದೆಗೆ ಜಾಹಿರಾತು ಪ್ರಕಟವಾಗಿದ್ದು, ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಅಧಿಕೃತ ಜಾಲತಾಣ http://ahvs.kar.nic.in/ ನಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ಇಂತಹ ಅನಧಿಕೃತ ನೇಮಕಾತಿ ಜಾಹೀರಾತುಗಳಿಗೆ ಮೋಸ ಹೋಗಬಾರದೆಂದು ಎಚ್ಚರಿಕೆ ನೀಡಿದರು.

Related