ದಂಪತಿಯ ಬರ್ಬರ ಕೊಲೆ

ದಂಪತಿಯ ಬರ್ಬರ ಕೊಲೆ

ಕಲಬುರಗಿ : ಕಮಲಾಪುರ ತಾಲ್ಲೂಕಿನಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದಿನಸಿ ತಾಂಡಾದಲ್ಲಿ ಶುಕ್ರವಾರ ತಡರಾತ್ರಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡದರು.

ಮಾರುತಿ ದೇವಲಾ ಜಾಧವ್ (45), ಪತ್ನಿ ಶಾರದಾಬಾಯಿ (35) ಎಂಬುವವರೇ ಕೊಲೆಯಾದ ದಂಪತಿ. ದುಷ್ಕರ್ಮಿಗಳು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಮೃತ ದಂಪತಿಗೆ ಆರು ಜನ ಪುತ್ರಿಯರು, ಓರ್ವ ಪುತ್ರನಿದ್ದು, ಕೆಲ ದಿನಗಳ ಹಿಂದೆ ಒಬ್ಬ ಮಗಳೊಂದಿಗೆ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಯುವಕನ ವಿರುದ್ಧ ಮಾರುತಿ ದೇವಲಾ ಪೊಲೀಸರಿಗೆ ದೂರು ಸಹ ನೀಡಿದರು. ಇದೇ ದ್ವೇಷದಿಂದ ತಂದೆ-ತಾಯಿ ಇಬ್ಬರನ್ನೂ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related