ಲಾರಿ ಚಾಲನೆಗೆ ಆಟೋ ಡ್ರೈವರ್ ಬಲಿ

ಲಾರಿ ಚಾಲನೆಗೆ ಆಟೋ ಡ್ರೈವರ್ ಬಲಿ

ಕೊರಟಗೆರೆ : ಟಾಟಾ ಎಸಿ ಚಾಲಕನ ಅತಿವೇಗ ಮತ್ತು ಅವೈಜ್ಞಾನಿಕ ಚಾಲನೆಯಿಂದ ಕೊರಟಗೆರೆ ಮೂಲದ ಆಟೋ ಡ್ರೈವರ್ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.

ಕೊರಟಗೆರೆ ಪಟ್ಟಣದ ಸಮೀಪದ ರಾಜ್ಯ ಹೆದ್ದಾರಿಯ ನವಿಲುಕುರಿಕೆ ಕ್ರಾಸ್‌ನಲ್ಲಿ ಟಾಟಾಎಸಿ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕನ ದೇಹ ಹಾರಿಹೋಗಿದೆ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾ.ಪಂ ವ್ಯಾಪ್ತಿಯ ಪುಟ್ಟನರಸಯ್ಯಪಾಳ್ಯದ ಗ್ರಾಮದ ವಾಸಿಯಾದ ದೋಣಿಯಪ್ಪನ ಮಗನಾದ ಮುತ್ತುರಾಜು(44)ಮೃತಪಟ್ಟ ದುರ್ದೈವಿ.

ಟಾಟಾಎಸಿ ಬರುತ್ತೀದ್ದ ವೇಗದಿಂದ ಆಟೋ ಮೂರು ಪಲ್ಟಿ ಹೊಡೆದಿದೆ. ಆಟೊ ಚಾಲಕ ಹಾರಿ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಟಾಟಾ ಎಸಿ ಚಾಲಕ ವಾಹನ ಬಿಟ್ಟು ಪರಾರಿ ಆಗಿದ್ದಾನೆ.

ಸ್ಥಳಕ್ಕೆ ಕೊರಟಗೆರೆ ಸಿಪಿಐ ನಧಾಪ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related