ರಾಜಕೀಯ ಭವಿಷ್ಯಕ್ಕೆ ಉರುಳಾಯ್ತಾ ಗೌಡರ ಹತ್ಯೆ?

ರಾಜಕೀಯ ಭವಿಷ್ಯಕ್ಕೆ ಉರುಳಾಯ್ತಾ ಗೌಡರ ಹತ್ಯೆ?

ಹುಬ್ಬಳ್ಳಿ : ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತವಾಗಿರುವ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ರಾಜಕೀಯ ಜೀವನ ಅಡ್ಡದಾರಿ ಹಿಡಿಯಿತಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಈಗಾಗಲೇ ಎರಡು ಚುನಾವಣೆಗಳಲ್ಲಿ ಸೋಲನುಭವಿಸಿದ್ದಾರೆ, ಹೀಗಾಗಿ ಮುಂದಿನ ರಾಜಕೀಯ ಭವಿಷ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆಯಿದೆ.

ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ ಯೋಗಿಶ್ ಗೌಡ ವಿನಯ್ ಕುಲಕರ್ಣಿ ಅವರ ಪ್ರಬಲ ಎದುರಾಳಿ ಎಂದು ಬಿಂಬಿಸಲಾಗಿತ್ತು. ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಇಬ್ಬರು ಭಿನ್ನಾಬಿಪ್ರಾಯ ಹೊಂದಿದ್ದರು.

ರಾಜಕೀಯ ದ್ವೇಷ ವಯಕ್ತಿಕ ದ್ವೇಷಕ್ಕೆ ತಿರುಗಿ ಯೋಗಿಶ್ ಗೌಡ ಹತ್ಯೆ ನಡೆದಿದೆ ಎಂದು ಬಿಂಬಿಸಲಾಯಿತು. ಇದನ್ನೇ ರಾಜಕೀಯ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ ವಿನಯ್ ಕುಲಕರ್ಣಿಯನ್ನು ರಾಜಕೀಯವಾಗಿ ಮಟ್ಟ ಹಾಕಲು ವ್ಯವಸ್ಥಿತವಾಗಿ ಬಳಸಿಕೊಂಡಿತು. ಬಿಜೆಪಿ ಮುಖಂಡರು ಯೋಗೇಶ್ ಗೌಡ ಹತ್ಯೆ ಪ್ರಕರಣ ವಿಷಯವಾಗಿ ವಿನಯ್ ವಿರುದ್ದ ಆರೋಪ ಮಾಡಿದ್ದರು.

Related