ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ

ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ

ಬೆಂಗಳೂರು : ಶಾಲೆಗೆ ಬಹಳ ದಿನ ಬ್ರೇಕ್ ಹಾಕಬಾರದು, ಮಕ್ಕಳ ವರ್ತನೆ ಬದಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಹೇಳಿದರು.

ಇಂದು ಶಾಲೆ ಆರಂಭವಾಗಿರುವ ಹಿನ್ನೆಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಶಿಕ್ಷಣದ ಮೇಲೆ ಸಮಸ್ಯೆ ಉಂಟಾಗುತ್ತದೆ. ಕೋವಿಡ್ ನಿಯಮ ಪಾಲನೆ ಮಾಡಿ ಓಪನ್ ಮಾಡಲಿ. ಮಾಡದೇ ಹೋದರೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.

ಇನ್ನು ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ. ಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ. ಅವರ ಹೇಳಿಕೆ ಬೇರೆ ಅರ್ಥ ಕೊಡುತ್ತಿದೆ. ಈಗಲೂ ಅವರೇ ಸಿಎಂ ಆಗಿದ್ದಾರೆ. ಅವರು ಸಿಎಂ ಅಲ್ಲ ಅಂತ ಯಾರು ಹೇಳಿಲ್ವಲ್ಲಾ(?) ಮತ್ತೆ ಮತ್ತೆ ನಾನೇ ಸಿಎಂ ಎಂದು ಹೇಳೋದೇಕೆ(?) ಎಂದು ಸಿಎಂ ಹೇಳಿಕೆಯನ್ನು ಡಿಕೆಶಿ ವ್ಯಂಗ್ಯವಾಡಿದ್ದಾರೆ.

Related