ಶಾಸಕ ಎಂ ಸತೀಶ್ ರೆಡ್ಡಿಅವರ ನೇತೃತ್ವದಲ್ಲಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಶಾಸಕ ಎಂ ಸತೀಶ್ ರೆಡ್ಡಿಅವರ ನೇತೃತ್ವದಲ್ಲಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಬೊಮ್ಮನಹಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಪ್ರಯುಕ್ತ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಎಂ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಾಗೂ ಹುಳಿಮಾವು ಗ್ರಾಮದ ಕೋದಂಡರಾಮಸ್ವಾಮಿ‌ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಅಯೋಧ್ಯಾ ಶ್ರೀ ರಾಮಚಂದ್ರನ ಪುನರ್‌ ಪ್ರತಿಷ್ಠಾಪನಾ ಅಂಗವಾಗಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ ಅಯೋಧ್ಯೆಯ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪುಣ್ಯದ ಕ್ಷಣಗಳನ್ನು ಎಲ್‌ಇಡಿ ಪರದೆ ಮೂಲಕ ಕಣ್ತುಂಬಿಕೊಂಡೆವು. ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ಪಾನಕ‌, ಮಜ್ಜಿಗೆ ವಿತರಿಸಲಾಯಿತು.

ಈ ಸಂದರ್ಬದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ರವಿ ಪುರುಷೋತ್ತಮ್ ರವರು, ಮಾಜಿ‌ ನಗರಸಭಾ ಸದಸ್ಯರಾದ ಮುರಳಿ ರವರಯ, ಹಿರಿಯ ಬಿಜೆಪಿ ಮುಖಂಡರಾದ ಮುತ್ತಪ್ಪ ರವರು, ಗ್ರಾಮದ ಮುಖಂಡರು,ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Related