ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್

ಆಂಜನೇಯನ ದರ್ಶನ ಪಡೆದ ಪವರ್ ಸ್ಟಾರ್

ಗಂಗಾವತಿ : ತಾಲೂಕಿನ ಅಂಜನಾದ್ರಿಯ ಬೆಟ್ಟಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.

ಬಳಿಕ ಮಾತನಾಡಿದ ಅವರು, ಹನುಮಂತನ ಜನ್ಮ ಸ್ಥಳ ಕಿಷ್ಕಿಂಧೆಯ ಗುಡ್ಡಪ್ರದೇಶ ತುಂಗಭದ್ರಾ ನದಿಯ ಮಡಿಲು ಅದ್ಭುತ ಸೌಂದರ್ಯದ ತಾಣವಾಗಿದೆ. ಹನುಮಂತ ಜನಿಸಿದ ಸ್ಥಳ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿ. ಸರಕಾರ ಇಲ್ಲಿಗೆ ಆಗಮಿಸುವ ದೇಶ ವಿದೇಶದ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಬೇಕು.

ಪ್ರತಿ ವರ್ಷ ಹನುಮ ಜಯಂತಿಯನ್ನು ಅಂಜನಾದ್ರಿಯಲ್ಲಿ ಆಚರಿಸುವಂತೆ, ಪ್ರತಿ ಹನುಮ ಭಕ್ತರ ಮನೆಯಲ್ಲಿ ಹನುಮಾನ್ ಚಾಲಿಸಾ ಪಠಣಾ ಮಾಡುವ ಮೂಲಕ ಏಕಾಗ್ರತೆ ಸಾಧಿಸಲು ಸಾಧ್ಯ. ಯುವಕರು ದುಶ್ಚಟ ಬಿಟ್ಟು ಆಂಜನೇಯನAತೆ ಆರೋಗ್ಯ ಕಾಪಾಡಿಕೊಳ್ಳುಬೇಕೆಂದು ಕಿವಿ ಮಾತು ಹೇಳಿದರು.

Related