ಅನಿರುದ್ಧ್ ನಮೋಗೆ ಪತ್ರ ಬರೆದಿದ್ಯಾಕೆ.?

ಅನಿರುದ್ಧ್ ನಮೋಗೆ ಪತ್ರ ಬರೆದಿದ್ಯಾಕೆ.?

ಬೆಂಗಳೂರು, ಮಾ.11 : ನಟ ಅನಿರುದ್ಧ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಇದೀಗ ಒಂದೊಳ್ಳೆ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.ಅನಿರುದ್ಧ್ ವಿಷ್ಣುವರ್ಧನ್, ಬರವಣಿಗೆಯನ್ನೂ ರೂಢಿಸಿಕೊಂಡಿದ್ದಾರೆ. ಇತ್ತೀಚೆಗೆ 94 ವರ್ಷದ ನಿವೃತ್ತ ಯೋಧನಿಗೆ ಮನೆ ಇಲ್ಲ ಎನ್ನೋದನ್ನ ಮನಗಂಡು ಅನಿರುದ್ಧ್, ಲೇಖನ ಬರೆದಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಪತ್ರ ಬರೆಯುವ ಮೂಲಕ ನಿವೃತ್ತ ಯೋಧನ ಕಷ್ಟಕ್ಕೆ ಅನಿರುದ್ಧ ವಿಷ್ಣುವರ್ಧನ್ ಮಿಡಿದಿದ್ದಾರೆ. ಸುಭಾಶ್ ಚಂದ್ರ ಭೋಸ್ ಅವರು ಕಟ್ಟಿದ ಆಜಾದ್ ಹಿಂದ್ ಫೌಜ್ನಲ್ಲಿ ಭಾಗವಹಿಸಿ, ಹೋರಾಡಿದ ನಿವೃತ್ತ ಸೈನಿಕ ಸಿ.ಎಂ ಪಾಂಡಿಯಾ ರಾಜ್. ಸದ್ಯ ತಮಿಳುನಾಡಿನ ರಾಮನಾಥಪುರಂನಲ್ಲಿ ಸರಿಯಾದ ಸೂರಿಲ್ಲದೇ ಪಾಂಡಿಯಾ ರಾಜ್, ಪುಟ್ಟ ಬಾಡಿಗೆ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ., ಸೂರು ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಇ-ಮೇಲ್ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಲಿದೆಯೇ ಕಾದು ನೋಡಬೇಕಿದೆ.

Related