ಕೆಂಭಾವಿ : ಪಟ್ಟಣದ ಪಿಎಸಿಎಸ್ ಸಂಘದ ಕಾರ್ಯಾಲಯದಲ್ಲಿ ಇಂದು ನಿಜ ಶರಣ ಅಂಬಿಗರ ಚೌಡಯ್ಯನವರ 901 ನೇ ಜಯಂತೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪೋ ಪಾಟೀಲ ಅವರು, ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಾನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, 12ನೇ ಶತಮಾನದ ಬಸವಾದಿ ಶರಣರ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ, ತನ್ನ ದಿಟ್ಟ ನಡೆ, ನುಡಿಯಿಂದ ಸಮಾಜದ ಅಂಕು-ಡೂಂಕು ತಿದ್ದಲು ಶ್ರಮಿಸಿದ ಅಪರೂಪದ ಶರಣ ಅಂಬಿಗರ ಚೌಡಯ್ಯನವರು, ನಿಷ್ಠುರ ವಚನಗಳ ಮೂಲಕ ಶಿವಶರಣದಿಂದಲೇ” ವೀರಗಣಾಚಾರಿ” ಎಂದು ಕರೆಯಿಸಿಕೊಂಡವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ತಿಪ್ಪಣ್ಣ.ಡಿ ಯಾಳಗಿ ನಿರ್ದೇಶಕ ಮುರಗೇಶ ಎಸ್ ಹುಣಸಗಿ, ಮಹಿಪಾಲರೆಡ್ಡಿ ದಿಗ್ಗಾವಿ, ರಹೀಮಾನ ಪಟೇಲ್ ಯಲಗೋಡ, ಕಾರ್ಯದರ್ಶಿ ರಂಗಪ್ಪ ವಡ್ಡರ, ಭೀಮು ಶಹಾಪುರ, ಶರಣು ಅರಕೇರಿ ಸೇರಿದಂತೆ ಉಪಸ್ಥಿತರರಿದ್ದರು.