ಶೈಕ್ಷಣಿಕ ಶಕ್ತಿ ಪಡೆದುಕೊಳ್ಳಲು ಅಂಬೇಡ್ಕರ್ ಕಾರಣ

ಶೈಕ್ಷಣಿಕ ಶಕ್ತಿ ಪಡೆದುಕೊಳ್ಳಲು ಅಂಬೇಡ್ಕರ್ ಕಾರಣ

ಶಿಡ್ಲಘಟ್ಟ: ತಾಲೂಕು ಆಡಳಿತ ನಾಡಹಬ್ಬಗಳ ಆಚರಣೆ ಸಮಿತಿ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶಿಡ್ಲಘಟ್ಟ ತಾಲೂಕು ವರದನಾಯಕನಹಳ್ಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಹಾಗೂ ಮಾಜಿ ಉಪ ರಾಷ್ಟ್ರಪತಿ ಡಾ. ಬಾಬು ಜಗಜೀವನ್‌ರಾಮ್ ಜಯಂತಿ ಆಚರಿಸಲಾಯಿತು.
ಶಾಸಕ ವಿ. ಮುನಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಶೋಷಿತರು, ಹಿಂದುಳಿದವರು ರಾಜಕೀಯ ಆರ್ಥಿಕ ಶೈಕ್ಷಣಿಕ ಶಕ್ತಿ ಪಡೆದುಕೊಳ್ಳಲು ಕಾರಣವಾಯಿತು.
ಬಾಬು ಜಗಜೀವನ್‌ರಾಮ್ ಹಸಿರು ಕ್ರಾಂತಿ ಮಾಡಿದ್ದರಿಂದ ದೇಶದ ಜನರು ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವಂತಾಯಿತು. ಹಸಿವು ಮುಕ್ತ ದೇಶ ನಿರ್ಮಾಣಕ್ಕೆ ಅವರು ಕಾರಣರಾದರು ಎಂದರು.

Related