ಮಹಾನಾಯಕನಿಗೆ ಸದಾ ಬೆಂಬಲ

ಮಹಾನಾಯಕನಿಗೆ ಸದಾ ಬೆಂಬಲ

ಚಿಂಚೋಳಿ : ತಾಲ್ಲೂಕಿನ ಚಿಮ್ಮಾನಚೋಡ ಗ್ರಾಮದ ದಲಿತರ ಹಲವು ವರ್ಷಗಳ ಬೇಡಿಕೆಯಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು 4.50 ಲಕ್ಷ ವೆಚ್ಚದಲ್ಲಿ ತಮ್ಮ ಸ್ವಂತ ಹಣದಲ್ಲಿ ಸಂಜೀವನ ಆರ್. ಯಾಕಪೂರ ನಿರ್ಮಿಸಿ ಇಂದು ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ನವ ತರುಣ ಸಂಘ ಚಿಮ್ಮನಚೋಡ್ ವತಿಯಿಂದ ಸಂಜೀವನ ಹಾಗೂ ಕಾಂಗ್ರೆಸ್ ಮುಖಂಡ ಸುಭಾಶ ರಾಠೋಡ್ ಮಹಾನಾಯಕ ಪೋಸ್ಟರನ್ನು ಉದ್ಘಾಟಿಸಿದರು.

ಅಂಬೇಡ್ಕರ್‌ರವರ ಜೀವನ ಚರಿತ್ರೆ ಎಲ್ಲರಿಗೂ ಮಾರ್ಗದರ್ಶನ. ಅವರು ನಡೆದು ಬಂದ ಹಾದಿಯ ಇತಿಹಾಸ ತಿಳಿಯುವ ಅಗತ್ಯತೆ ಎಲ್ಲರಿಗೂ ಇದೆ ಎಂದು ಸಂಜೀವನ ಆರ್ ಯಾಕಪೂರ ನುಡಿದರು. ಮಹಾನಾಯಕ ಧಾರಾವಾಹಿ ಪ್ರಸಾರಕ್ಕೆ ನಮ್ಮೆಲ್ಲರ ಬೆಂಬಲ, ಸಹಕಾರ ಎಂದಿಗೂ ಇರಲಿದೆ ಎಂದರು.

Related