ಮಹಾಲಿಂಗಪುರ : ಕೆಸರಗೊಪ್ಪ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸದಾ ಬದ್ಧನಾಗಿ, ಹೆಚ್ಚಿನ ಕಾಮಗಾರಿಗೆ ಆದ್ಯತೆ ನೀಡುವುದಾಗಿ ತೇರದಾಳ ಶಾಸಕ ಸಿದ್ದು ಸವದಿ ಭರವಸೆ ನೀಡಿದ್ದಾರೆ.
ಬುಧವಾರ ಗ್ರಾ.ಪಂ. ಸದಸ್ಯರೊಂದಿಗೆ ಸಭೆ ನಡೆಸಿದ ಅವರು ಗ್ರಾಮದಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಕಾಮಗಾರಿ ಮಾಡಿ, ರಸ್ತೆ , ಹೊಲಗಳ ರಸ್ತೆಗಳಿಗೆ ಆದ್ಯತೆ ನೀಡುವುದಾಗಿ ಶಾಸಕ ಸಿದ್ದು ಸವದಿ ಗ್ರಾ.ಪಂ. ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಆನಂದ ಢವಳೇಶ್ವರ, ಉಪಾಧ್ಯಕ್ಷ ಹನಮಂತ ಮೋಪಗಾರ, ಪ್ರಕಾಶ ಚನಾಳ, ಮಾರುತಿ ಸತ್ತಿಗೇರಿ, ಶ್ರೀಶೈಲ ಸತ್ತಿಗೇರಿ, ಮಹಾಲಿಂಗ ಶಿರೋಳ, ಮಲ್ಲು ಬಾಡಗಿ, ಪಾಪು ಉಳ್ಳಾಗಡ್ಡಿ, ಮಹಾದೇವ ಕಲ್ಲಟ್ಟಿ, ವಿಠಲ ಬನಾಜ, ರಾಮು ದೊಡಮನಿ, ವಿಠಲ ಹರಿಜನ, ಸದಾಶಿವ ಕುರಿ, ಮಹೇಶ್ ಬಾಗಲಿ, ಬಾಳಪ್ಪ ದೊಡಮನಿ, ಬಸವರಾಜ ಢವಳೇಶ್ವರ್, ಮಹಾಲಿಂಗ ನಾಯಕ್, ಶ್ರೀಶೈಲ ಚನಾಳ, ಅಭಿಯಂತರ ಭಾಗವಾನ, ಅಧಿಕಾರಿಗಳಾದ ಸಂಜು ಹಿಪ್ಪರಗಿ, ಮಹಾಲಿಂಗಪುರ ಠಾಣಾಧಿಕಾರಿಗಾಳದ ವಿಜಯ್ ಕಾಂಬಳೆ, ಪಿ ಡಿ ಓ ವಿದ್ಯಾ ಕುಳ್ಳೋಳ್ಳಿ, ಗುತ್ತಿಗೆದಾರ ಪೆಂಡಾರಿ, ಗ್ರಾ.ಪಂ. ಸಿಬ್ಬಂದಿ ಇನ್ನಿತರರಿದ್ದರು.