ಶಾಸಕರೆಲ್ಲ ನಿರುದ್ಯೋಗಿಗಳು: ಮುನಿರತ್ನ

ಶಾಸಕರೆಲ್ಲ ನಿರುದ್ಯೋಗಿಗಳು: ಮುನಿರತ್ನ

ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆ ಕಾವು ಬಿಸಿ ಏರಿರುವ ಬೆನ್ನಲ್ಲೇ, ಪರ ವಿರೋಧದ ವಾಕ್ ಸಮರ ಮುಂದುವರೆದಿದೆ. ಕ್ಷೇತ್ರದ ಬಿಜೆಪಿ ಅಭ್ರ‍್ಥಿ ಮುನಿರತ್ನ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ವಾಕ್ ಸಮರವನ್ನೇ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕರೆಲ್ಲಾ ನಿರುದ್ಯೋಗಿಗಳು ಎನ್ನುವ ಮೂಲಕ ಕಾಂಗ್ರೆಸ್ ಬಗ್ಗೆ ಲೇವಡಿ ಮಾಡಿದ್ದಾರೆ.

ಆರ್‌ಆರ್‌ನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಆಡಳಿತಾರೂಢ ಬಿಜೆಪಿ ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಎಂಬುದಾಗಿ ಟೊಂಕ ಕಟ್ಟಿನಿಂತಿದ್ದರೇ, ಕಾಂಗ್ರೆಸ್ ಪಕ್ಷದ ನಾಯಕರು ತಂತ್ರಗಾರಿಕೆಯನ್ನೇ ಹೆಣೆಸಿದ್ದಾರೆ. ಇತ್ತ ಜೆಡಿಎಸ್ ಪಕ್ಷ ಕೂಡ ಆರ್ ಆರ್ ನಗರದಲ್ಲಿ ತಮ್ಮ ಅಭ್ರ‍್ಥಿ ಗೆಲುವಿಗೆ ಹರಸಾಹಸ ನಡೆಸುತ್ತಿದೆ.

Related