ಸಂಭ್ರಮದ ತೆಪ್ಪೋತ್ಸವ

ಸಂಭ್ರಮದ ತೆಪ್ಪೋತ್ಸವ

ಮಹಾಲಿಂಗಪುರ : ಸ್ಥಳೀಯ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ 92ನೇ ಪುಣ್ಯಾರಾಧನೆಯ ನಿಮಿತ್ಯ 39ನೇ ವರ್ಷದ ತೆಪ್ಪೋತ್ಸವವು ಸಂಭ್ರಮದಿಂದ ಜರುಗಿತು. ತೆಪೆÇ್ಪೀತ್ಸವದ ನಿಮಿತ್ಯ ಬೆಳಗ್ಗೆ 8 ಗಂಟೆಗೆ ಸಿದ್ದಾರೂಢರ ಮೂರ್ತಿಗೆ ಅಭಿಷೇಕ, 10 ಘಂಟೆಗೆ ಅನ್ನಪೂರ್ಣೇಶ್ವರಿ ನೇಕಾರ ಮಹಿಳಾ ಸಂಘದವರಿಂದ ಮುತ್ತೈದೆಯರಿಗೆ ಉಡಿ ತುಂಬುವುದು, ವಿವಿಧ ಗ್ರಾಮಗಳ ಭಜನಾ ಮೇಳದವರಿಂದ ಭಜನಾ ಕಾರ್ಯಕ್ರಮ ಮಂಗಳವಾರ ಜರುಗಿತು.

ಸಂಜೆ 6 ಗಂಟೆಗೆ ಅಲಂಕೃತ ರಥದಲ್ಲಿ ಸಿದ್ಧಾರೂಢರ ಮೂರ್ತಿ ಇಟ್ಟು ಪೂಜೆ ಸಲ್ಲಿಸಿದ ಡಾ. ಬಿ.ಡಿ.ಸೋರಗಾಂವಿ ಅವರು ಜಲರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಅತಿಥಿಗಳಾಗಿ ಕೊಪ್ಪಳದ ಶಿವಪ್ರಕಾಶಾನಂದ ಸ್ವಾಮಿಜಿ, ನಿಂಗನೂರ ಶಿವಪುತ್ರಾವಧೂತ ಸ್ವಾಮಿಜಿ, ಂತೆ ಹಲವರು ಇದ್ದರು.

Related