ಬೆಟ್ಟದಪುರ : ಸ್ಥಳಿಯ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ರೂ ೪ ಕೋಟಿ ವೆಚ್ಚದಿಂದ ನಿರ್ಮಿಸುವ ರಸ್ತೆ, ಚರಂಡಿ, ಬೀದಿ ದೀಪಗಳ ಅಳವಡಿಕೆಗೆ, ಶಾಸಕ ಕೆ. ಮಹದೇವ್ ಮಂಗಳವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕಾವೇರಿ ನದಿಯಿಂದ ಕುಡಿಯುವ ನೀರಿನ ಯೋಜನೆಗೆ ೨೫೦ ಕೋಟಿ ರೂ. ನೀಡಲಾಗಿದೆ. ಎಂದು ತಿಳಿಸಿದರು.
ಅಭಿವೃದ್ಧಿಗಾಗಿ ಮನವಿ : ಬೆಟ್ಟದಪುರವನ್ನು ಪಟ್ಟಣ ಪಂಚಾಯತಿ ಮೆಲ್ದರ್ಜೆಗೆ, ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು, ಗ್ರಾಮದೇವತೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ತಾಲ್ಲೂಕು ರೈತ ಮುಖಂಡ ದೇವರಾಜು, ರಾಜಶೇಖರ್ ರವರು ಮನವಿ ಮಾಡಿದರು.