ಜನತೆ ವಿಶ್ವಾಸಕ್ಕೆ ಭಾಜನರಾದ ಪಿಎಸ್‌ಐ : ಶೇ.90ರಷ್ಟು ಪಟ್ಟಣ ಸ್ತಬ್ಧ

ಜನತೆ ವಿಶ್ವಾಸಕ್ಕೆ ಭಾಜನರಾದ ಪಿಎಸ್‌ಐ : ಶೇ.90ರಷ್ಟು ಪಟ್ಟಣ ಸ್ತಬ್ಧ

ಕೆಂಭಾವಿ : ವರ್ಷದ ಹಿಂದೆ ಪ್ರಾರಂಭವಾದ ಮಹಾಮಾರಿ ಇದೀಗ ಭಾರತದಲ್ಲಿ ತನ್ನ ಎರಡನೇ ಅಲೆಯ ಛಾಪನ್ನು ಮೂಡಿಸಿದೆ. ಸದ್ಯ ರಾಜ್ಯ ಸರ್ಕಾರ ಶನಿವಾರ ಮತ್ತು ಭಾನುವಾರವೀಕೆಂಡ್ ಲಾಕ್ ಡೌನ್ ಎಂಬ ಆದೇಶವನ್ನು ಹೊರಡಿಸಿದೆ.

ಆದರೆ ಪಟ್ಟಣದಲ್ಲಿ ವೀಕೆಂಡ್ ಲಾಕ್ ಡೌನ್ ಗೆ ಜಗ್ಗದ ಕೆಲವು ವ್ಯಾಪಾರಸ್ಥರು , ಹಾಗೂ ದಿನ ನಿತ್ಯದ ವ್ಯಾಪಾರಿಗಳಿಗೆ ಮತ್ತು ಜನರಿಗೆ ಕೆಂಭಾವಿ ಠಾಣೆಯ ದಕ್ಷ ಅಧಿಕಾರಿ ಪಿಎಸ್‌ಐ ಸುದರ್ಶನ ರೆಡ್ಡಿ ಸರ್ಕಾರದ ಆದೇಶ ಬಗ್ಗೆ ವ್ಯಾಪಾರಸ್ಥರಿಗೆ ಅರಿವು ಮೂಡಿಸುವ ಮೂಲಕ ಪಟ್ಟಣದ ಜನತೆ ವಿಶ್ವಾಸಕ್ಕೆ ಬಾಜಿನ ರಾಗಿದ್ದಾರೆ.

ಹೌದು ಸರ್ಕಾರದ ಆದೇಶಕ್ಕೆ ಜಗ್ಗದ ವ್ಯಾಪಾರಸ್ಥರ ಮೇಲೆ ಯಾವುದೇ ಖಾಕಿ ದರ್ಪವನ್ನು ತೋರಿಸದೆ. ಸಂಯಮದಿAದ ಅರಿವು ಮೂಡಿಸುವ ಮೂಲಕ ಜನರ ಪಾಲಿಗೆ ಆದರ್ಶ ಅಧಿಕಾರಿಯಾಗಿದ್ದಾರೆ
ಸದ್ಯ ಪಟ್ಟಣವು ಶೇಕಡಾ 95ಷ್ಟು ಸ್ತಬ್ಧವಾಗಿದೆ. ಮುಖ್ಯ ರಸ್ತೆಗಳು ಜನಸಂದಣಿ ಇಲ್ಲದೆ ಬಿಕೋ ಎನ್ನುತ್ತಿವೆ , ಇನ್ನೊಂದು ಕಡೆ ಪ್ರಯಾಣಿಕರಿಲ್ಲದೆ ನಿಂತಲ್ಲೆ ನಿಂತಿರುವ ಬಸ್ಸು. ಸದ್ಯ ಪಟ್ಟಣದಲ್ಲಿ ಔಷಧಿ , ಆಂಬ್ಯಲೆನ್ಸ್ , ಆಸ್ಪತ್ರೆ ಬಿಟ್ಟರೆ ಎಲ್ಲವೂ ಕ್ಲೋಸ್ ಆಗಿದೆ.

Related