45 ಹಾವಿನ ಮರಿ ರಕ್ಷಣೆ

  • In State
  • March 18, 2020
  • 391 Views
45 ಹಾವಿನ ಮರಿ ರಕ್ಷಣೆ

ಧಾರವಾಡ, ಮಾ.18 : ಜಿಲ್ಲೆಯ ಉರಗ ತಜ್ಞರೊಬ್ಬರು ಸುಮಾರು 45 ಹಾವಿನ ಮರಿಗಳನ್ನ ರಕ್ಷಿಸಿ ಅದನ್ನು ಕೆರೆ ದಂಡೆ ಬಳಿ ಬಿಟ್ಟು ಮಾನವಿಯತೆ ಮೆರೆದಿದ್ದಾರೆ. ಧಾರವಾಡದ ಕಲ್ಯಾಣನಗರದ ಮಂಜುನಾಥ ಕಾಲೋನಿಯ ಕವಿತಾ ದೇವರ ಅವರ ಮನೆ ಪಕ್ಕ ಹಾವೊಂದು ಮೊಟ್ಟೆ ಇಟ್ಟು ಹೋಗಿತ್ತು. ಈ ಮೊಟ್ಟೆಗಳು ಒಡೆದು ಹಾವಿನ ಮರಿಗಳು ಹೊರಬಂದಿವೆ. ಇದನ್ನ ನೋಡಿದ ಮನೆಯ ಮಾಲೀಕರು ಉರಗ ತಜ್ಞ ಮಂಜು ಭಜಂತ್ರಿಯವರಿಗೆ ಮಾಹಿತಿ ತಿಳಿಸಿದ್ದಾರೆ. ಮಂಜು ಅವರು ಈ ಮರಿಗಳನ್ನ ರಕ್ಷಿಸಿ ಅವುಗಳನ್ನು ತಂದು ಸುರಕ್ಷಿತವಾಗಿ ಕೆರೆಯ ಪಕ್ಕದಲ್ಲಿ ಬಿಟ್ಟಿದ್ದಾರೆ. ಈ ಹಾವಿನ ಮರಿಗಳು ಚಾಗರೆಟ್ ಎಂಬ ಕೆರೆ ಹಾವಿನ ಜಾತಿಗೆ ಸೇರಿದ್ದು, ಇವು ಯಾರಿಗಾದರೂ ಕಚ್ಚಿದರೂ ವಿಷ ಏರಲ್ಲ ಎನ್ನಲಾಗುತ್ತೆ. ಯಾಕಂದರೆ ಇವು ಕೆರೆಯ ಹಾವಿನ ಮರಿಗಳಾಗಿರುವುದರಿಂದ ಇವುಗಳಲ್ಲಿ ವಿಷ ಇರಲ್ಲ. ಆದರೆ ಜನರಿಗೆ ಈ ಬಗ್ಗೆ ಗೊತ್ತಿರಲ್ಲ, ಹೀಗಾಗಿ ಯಾವುದೇ ಹಾವು ಕಚ್ಚಿದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಉರಗ ತಜ್ಞ ತಿಳಿಸಿದರು.

Related