ರಾಹುಗ್ರಸ್ಥ ಸೂರ್ಯಗ್ರಹಣ ಸಂಭವ

ರಾಹುಗ್ರಸ್ಥ ಸೂರ್ಯಗ್ರಹಣ ಸಂಭವ

ಈ ವರ್ಷದ ಮೊದಲ ಸೂರ್ಯಗ್ರಹಣವು ಭಾರತದಲ್ಲಿ ಗೋಚರವಾಗದಿದ್ದರೂ ಅದರ  ಪರಿಣಾಮಗಳು ದಟ್ಟವಾಗಿ ಕಾಡುತ್ತವೆ ಎನ್ನತ್ತಾರೆ. ಜ್ಯೋತಿಷ್ಯರುಗಳಾದ ಡಾ. ಹರೀಶ್ ಕಶ್ಯಪ್ .

ಹೌದು, ಈ ಬಾರಿ ರಾಹುಗ್ರಸ್ಥ ಸೂರ್ಯಗ್ರಹಣವು ಸಂಭವಿಸಿದ್ದು ಇದು ಭಾಗಶಃ ವಾಗಿದ್ದರೂ ಇದರಿಂದ ಸಾಕಷ್ಟು ಹಾನಿಗಳು, ಅಪಾಯಗಳು ಸಂಭವಿಸಲಿದೆಯಂತೆ.

ಗ್ರಹಣದಿಂದಾಗಿ ಸಮಾಜ ಮತ್ತು ಅಧಿಕಾರದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ, ಪ್ರಕೃತಿ ವಿಕೋಪಗಳು ಎದುರಾಗುತ್ತವೆ, ಅಗ್ನಿ ಸ್ಪರ್ಶ ಅವಾಂತರಗಳು ಹೆಚ್ಚುತ್ತವೆ ಎಂದು ಕಶ್ಯಪ್ ಅವರು ತಿಳಿಸಿದ್ದಾರೆ.

ಎಲ್ಲ ಗ್ರಹಗಳೂ ಒಂದೇ ತಿಂಗಳಲ್ಲಿ ಬದಲಾಗಿರುವ ಅತಿ ಅಪರೂಪದ ಜ್ಯೋತಿಷ್ಯ ವಿದ್ಯಮಾನ ಏಪ್ರಿಲ್ ನಲ್ಲಿ ಘಟಸಿದೆ. ಇದಲ್ಲದೆ ಸೂರ್ಯ ಗ್ರಹಣ ಕೂಡಾ ಬಂದಿದೆ. ಇನ್ನು ಕೇವಲ 15 ದಿನಗಳಲ್ಲಿ ಚಂದ್ರಗ್ರಹಣವೂ ಬರುತ್ತಿದೆ. ನಿಧಾನ ಸಂಚಾರಿಯಾದ ಶನಿ ಕೂಡಾ ರಾಶಿ ಬದಲಿಸಿದ್ದಾನೆ. ಈ ಎಲ್ಲಾ ಜ್ಯೋತಿಷ್ಯ ವಿದ್ಯಮಾನಗಳು ಕೂಡಾ ಮುಂಬರುವ ಜಗತ್ತಿನ ಬದಲಾವಣೆಗಳನ್ನು, ಪ್ರಾಕೃತಿಕ ವಿದ್ಯಮಾನಗಳನ್ನು, ರಾಜಕೀಯ ಅಸ್ಥಿರತೆಗಳನ್ನು ತರುತ್ತವೆ.

Related