ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಸ್ಕ್ವಾಯ್ ಸಂಸ್ಥೆಯು ಬಡ ಮಕ್ಕಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ತರಬೇತಿ ಪಡೆದಿರುವ 20 ಜನ ಮಕ್ಕಳಲ್ಲಿ 6 ಜನರು ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
ಅವರೆಲ್ಲರೂ ಕೂಡ ರಾಜಾಸ್ಥಾನದ ಜೈಪುರದಲ್ಲಿ ಇದೇ ತಿಂಗಳ 25 ರಿಂದ 28 ರವೆರೆಗೆ ನಡೆಯಲಿರುವ 21ನೇ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ದೆಗೆ ಆಯ್ಕೆಯಾಗಿದ್ದಾರೆ.
ರಾಷ್ಡ್ರ ಮಟ್ಟಕ್ಕೆ ಹೋಗುತ್ತಿರುವ ಜಿಲ್ಲಾ ಸ್ಕ್ವಾಯ್ ಸಂಸ್ಥೆ ಕ್ರೀಡಾಪಟುಗಳಿಗೆ ಸಹಾಯ ಹಸ್ತ ನೀಡಬೇಕು ಹಾಗೂ ಪ್ರೋತ್ಸಾಹ ನೀಡಬೇಕು ಎಂದು ತರಬೇತುದಾರ ರುದ್ರೇಶ್ ಮನವಿ ಮಾಡಿದ್ದಾರೆ.
ಅವರೆಲ್ಲರೂ ಕೂಡ ಜಿಲ್ಲೆ ರಾಜ್ಯ ದೇಶಕ್ಕಾಗಿ ಆಡುತ್ತಿದ್ದು, ಇಂತಹ ಪ್ರತಿಭೆಯುಳ್ಳ ಹಾಗೂ ಬಡ ಕ್ರೀಡಾಪಟುಗಳಿಗೆ ಸಹಾಯವನ್ನು ಸರ್ಕಾರಿ ಇಲಾಖೆಗಳು ಸರ್ಕಾರದಿಂದ ಕ್ರೀಡೆಗೆಂದು ಮೀಸಲಿಟ್ಟಿರುವ ಅನುದಾನದಲ್ಲಿ ಸ್ವಲ್ಪ ಮಟ್ಟಿನ ಹಣವನ್ನು ಕ್ರೀಡಾಪಟುಗಳಿಗೆ ಸಹಕಾರ ಪ್ರೋತ್ಸಾಹವನ್ನು ಕ್ರೀಡಾ ಸಂಸ್ಥೆಗೆ ನೀಡಬೇಕು ಎಂದು ತರಬೇತುದಾರ ರುದ್ರೇಶ್ ಮನವಿ ಮಾಡಿದ್ದಾರೆ.