ಹಾಸನ : ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ಜಮೀನಿನಲ್ಲಿ ಮಹಿಳೆಯರಿಬ್ಬರ ಬರ್ಬರ ಹತ್ಯೆಯಾಗಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಮಂಜುಳಾ (28) ಮತ್ತು ಇವರ ತಾಯಿ ಭಾರತಿ (56) ಕೊಲೆಯಾದ ದುರ್ದೈವಿಗಳು ಮಂಜುಳಾ ಮತ್ತು ಶ್ರೀಧರ್ಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಗಂಡನಿದ್ದರೂ ಮಂಜುಳಾಗೆ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧ ಇತ್ತಂತೆ. ಇದಕ್ಕೆ ಆಕೆಯ ಅಮ್ಮನ ಸಾಥ್ ಕೂಡ ಇತ್ತಂತೆ. ಸಂಜೆ ಜಮೀನು ಬಳಿ ಪ್ರಿಯಕರನೊಂದಿಗೆ ತನ್ನ ಪತ್ನಿ ಇರುವುದನ್ನ ಕಂಡು ಕುಪಿತಗೊಂಡ ಆಕೆಯ ಗಂಡ ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. ಅಲ್ಲಿಯೇ ಇದ್ದ ಮಂಜುಳಾರ ತಾಯಿಯನ್ನೂ ಬಡಿದು ಕೊಂದಿದ್ದಾನೆ.
ಅಮ್ಮ-ಮಗಳು ಇಬ್ಬರೂ ರಕ್ತದದ ಮಡುವಿನಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿದ್ದು, ಸ್ಥಳಕ್ಕೆ ಬಂದ ಗಂಡಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಶ್ರೀಧರ್ನನ್ನು ಬಂಧಿಸಿದ್ದಾರೆ.
ಇತ್ತ ಅಪ್ಪ ಜೈಲು ಪಾಲು, ಅಮ್ಮ-ಅಜ್ಜಿ ಮಸಣ ಸೇರಿದ್ದು, ಮಕ್ಕಳಿಬ್ಬರು ಅನಾಥವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಳಿಕ ಎಸ್ಪಿ ಶ್ರೀನಿವಾಸಗೌಡ, ಡಿವೈಎಸ್ಪಿ ನಾಗೇಶ್, ಗ್ರಾಮಾಂತರ ಠಾಣೆ ಸಿಪಿಐ ವಸಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.