ಪ್ರತಿಭಟನೆಗೂ ಮುನ್ನ ಸಿಎಂ ಹೇಳಿದ್ದೇನು?

ಪ್ರತಿಭಟನೆಗೂ ಮುನ್ನ ಸಿಎಂ ಹೇಳಿದ್ದೇನು?

ದೆಹಲಿ: ಇಂದು ಕಾಂಗ್ರೆಸ್ ನಾಯಕರು ನಾವೆಲ್ಲರೂ ಅನಿವಾರ್ಯವಾಗಿ ದೆಹಲಿಯಲ್ಲಿರುವ ಐತಿಹಾಸಿಕ ಸ್ಥಳವಾಗಿರುವಂತಹ ಜಂತರ್ ಮಂತರ್ ನಲ್ಲಿ ನಾವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಮಾಡುತ್ತಿರುವ ಚಳುವಳಿ ರಾಜಕೀಯ ಚಳುವಳಿ ಅಲ್ಲ.

ಇದು ಕರ್ನಾಟಕ ರಾಜ್ಯದ ಹಿತವನ್ನು ಕಾಪಾಡುವುದಕ್ಕಾಗಿ, ಕನ್ನಡಿಗರ ಹಿತವನ್ನು ಕಾಪಾಡೋಗೋಸ್ಕರ ಮಾಡಿತ್ತಿರುವಂತಹ ಚಳುವಳಿ ಇದಾಗಿದೆ ಎಂದರು.

ಕೇಂದ್ರ ಸರ್ಕಾರ ನಮಗೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡಿದೆ. ಹಾಗಾಗಿ ಕಳೆದ ಐದಾರು ವರ್ಷಗಳಲ್ಲಿ ಕರ್ನಾಟಕ ರಾಜ್ಯಕ್ಕೆ 1 ಲಕ್ಷದ 87,000 ಕೋಟಿ ರೂಪಾಯಿ ಗಳನ್ನ ಕರ್ನಾಟಕಕ್ಕೆ  ನ್ಯಾಯಯುತವಾಗಿ ಬರಬೇಕಾಗಿದ್ದನ್ನು ನಾವು ಕಳೆದುಕೊಂಡಿದ್ದೇವೆ. ಅಷ್ಟರಮಟ್ಟಿಗೆ ನಮ್ಮ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಖಂಡಿಸಿ ನಾವು ಇಂದು ದೆಹಲಿಯಲ್ಲಿರುವ ಐತಿಹಾಸಿಕ ಸ್ಥಳ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮುಂದಾಗಿದ್ದೇವೆ ಎಂದು ಹೇಳಿದರು.

Related