ಕೊಪ್ಪಳ ಜು14: ಟ್ವೀಟ್ ಮಾಡಿದವರಿಗೆ ಉತ್ತರ ಕೊಡಲು ಆಗುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಪಂಪ ಸರೋವರ ಗುಜರಾತ್ನಲ್ಲಿದೆ ಎಂಬ ಗುಜರಾತ್ ಪ್ರವಾಸೋದ್ಯಮ ಇಲಾಖೆಯ ಟ್ವೀಟ್ಗೆ ಪ್ರತಿಕ್ರಿಯಿಸಿದ ಅವರು, ಪ್ರವಾಸೋದ್ಯಮ ಇಲಾಖೆ ಟ್ವೀಟ್ ಮಾಡಿದರೆ ಅದಕ್ಕೆ ನಾವು ಟ್ವೀಟ್ನಲ್ಲೇ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.
ಅಂಜನಾದ್ರಿಯಲ್ಲಿ ಆದಷ್ಟು ಬೇಗ ಅಭಿವೃದ್ಧಿ ಕೆಲಸ ನಡೆಯಲಿದೆ. ಬೊಮ್ಮಾಯಿ ಅವರಿಗೆ ಬೆಟ್ಟ ಹತ್ತಲು ಕಷ್ಟವಾಗುವ ಕಾರಣ ಅಂಜನಾದ್ರಿಯನ್ನು ವೈಮಾನಿಕವಾಗಿ ವೀಕ್ಷಣೆ ಮಾಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಗಾಗಿ ಏಜೆನ್ಸಿಗಳನ್ನು ಕರೆಯಲಾಗುತ್ತಿದೆ. ನಾವು ಆದಷ್ಟು ಬೇಗ ನೀಲ ನಕ್ಷೆ ತಯಾರಿಸುತ್ತೇವೆ ಎಂದು ಆನಂದ್ ಸಿಂಗ್ ತಿಳಿಸಿದರು.
ಟ್ವೀಟ್ನಲ್ಲಿ ಏನಿತ್ತು?
ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಮಾತೆ ಶಬರಿಯನ್ನು ಭೇಟಿಯಾದ ಕಥೆಗಳಿಂದ ಆವೃತವಾಗಿರುವ ಕೆರೆ. ಶಾಂತಿಯುತ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ಪಂಪಾ ಸರೋವರ ನಿಮಗಾಗಿ ಕಾಯುತ್ತಿದೆ ಎಂದು ಬರೆದು ಡ್ಯಾಂಗ್ ಜಿಲ್ಲೆಯಲ್ಲಿರುವ ಸರೋವರದ ಫೋಟೋವನ್ನು ಜುಲೈ 11 ರಂದು ಟ್ವೀಟ್ ಮಾಡಿತ್ತು.