ಸಗರ ದಲಿತರ ಕೇರಿಗೆ ಸಿಗದ ನೀರು

  • In State
  • May 7, 2025
  • 267 Views
ಸಗರ ದಲಿತರ ಕೇರಿಗೆ ಸಿಗದ ನೀರು

ಶಹಾಪುರ: ತಾಲೂಕಿನ ಸಗರ ಗ್ರಾಮದ ದಲಿತರ ಕೇರಿಗೆ ಹನಿ ನೀರಿಗೆ ಕಳೆದ 4 ತಿಂಗಳಿನಿಂದ ನರಳಾಟ ನಡೆಯುತ್ತಿದ್ದು, ಅಷ್ಟೊ ಇಷ್ಟೋ ನೀರಿನ ವ್ಯವಸ್ಥೆ ನಿತ್ಯ ನಡೆಯುತ್ತಿದ್ದು, ಶಾಶ್ವತವಾಗಿ ಕುಡಿಯುವ ನೀರಿನ ಪರಿಹಾರ ಕೊಡಲು ಗ್ರಾಮದ ಕೇಲ ಸವರ್ಣೀಯರು ಸಹ ಇದಕ್ಕೆ ತಕರಾರು ಮಾಡುತ್ತಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ಹೆಚ್ಚು ಒತ್ತಡ ಹೇರುತ್ತಿದ್ದು, ಅಧಿಕಾರಿಗಳು ಸಹ ತಲೆಕೆಡಿಸಿಕೊಳ್ಳದೆ ದಲಿತರ ಜೀವ ಹಿಂಡುತ್ತಿದ್ದಾರೆ ಎಂದು ದಲಿತ ಮುಖಂಡ ಶರಣು ಸಗರ ಆರೋಪಿಸಿದ್ದಾರೆ.

ಈ ಕುರಿತು ಸಾಕಷ್ಟು ಬಾರಿ ಮನವಿ ಪತ್ರ, ಪತ್ರಿಕೆಗಳಲ್ಲಿ ವಿಶೇಷ ವರದಿಗಳು ಪ್ರಕಟಗೊಂಡರು ಸಹ ಕೇವಲ ತಾತ್ಕಲಿಕ ಪರಿಹಾರದ ಭರವಸೆ ನೀಡಿ ಟ್ಯಾಂಕರ್‌ನಿಂದ ನೀರು ನೀಡುತ್ತಿದ್ದು ಕೇಲವರಿಗೆ ಸಿಗುತ್ತಿದ್ದು ಇನ್ನೂ ಕೇಲವರಿಗೆ ನೀರು ಸಿಗುತ್ತಿಲ್ಲಾ. ಶಾಶ್ವತ ಪರಿಹಾರ ನೀಡಬೇಕಾದ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಮಸಭೆಯ ಹೆಸರಲ್ಲಿ ಸುಖಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ನೀರಿನ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲಾ.

ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ತಾ.ಪಂ ಇಓ ಅವರು ಸಹ ಕೈಚೆಲ್ಲಿ ಕುಳಿತಿದ್ದು, ಕೇವಲ ನಾಮಕವಸ್ಥೆಗೆ ಬೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕೇವಲ ಭರವಸೆಯ ಮಾತುಗಳನ್ನು ಆಡಿ ಹೋಗುತ್ತಿದ್ದು ಗ್ರಾಮದ ರಾಜಕೀಯ ನಾಯಕರಿಗೆ ಮಣಿದು ನೀರು ನೀಡುತ್ತಿಲ್ಲಾ ಎಂದು ಬಲವಾದ ಆರೋಪ ಮಾಡಿದ್ದಾರೆ. ಇದರಿಂದ ದಲಿತರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಬಿಡಲ್ಲಾ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿದ್ದು ಈಗಾಗಲೇ ಶೇ.80 ರಷ್ಟು ಬಿಲ್ ಪಾವತಿಯಾಗಿದ್ದು, ಒಂದು ಹನಿ ನೀರು ಸಿಕ್ಕಿಲ್ಲಾ. ಕಾಮಗಾರಿ ಪೂರ್ಣಗೊಂಡು ನೀರು ಸಿಕ್ಕರೇ ದಲಿತರ ಕೇರಿಗೂ ನೀರು ಸಿಗಲಿದೆ ಎನ್ನುವುದು ಕೇಲವರ ಅಭಿಪ್ರಾಯ. ಇದನ್ನೂ ಓದಿ: 66 ನವ ದಂಪತಿಗಳ ಮದುವೆ ಕಾರ್ಯಕ್ರಮಕ್ಕೆ ಕೆಹೆಚ್. ಮುನಿಯಪ್ಪ ಚಾಲನೆ

ಸಚಿವರ ಗಮನಕ್ಕಿದ್ದರು, ನೀರು ಸಿಗುತ್ತಿಲ್ಲಾ

ಗ್ರಾಮದಲ್ಲಿ2 ಕಡೆ ಪೈಪ್‌ಲೈನ್‌ಗಾಗಿ ತೊಡಿ ಬಿಡಲಾಗಿದೆ. ನೀರು ಕೊಡಲು ತಯಾರಿದ್ದು ಕೇಲವರ ನಾಟಕೀಯಕ್ಕೆ ದಲಿತರಿಗೆ ನೀರು ಸಿಗದ ಹಾಗೆ ಮಾಡುತ್ತಿದ್ದಾರೆ. ಇನ್ನು ತೊಡಿ ಬಿಟ್ಟ ಗುಂಡಿಗೆ ಸಿದ್ದಪ್ಪ ಎನ್ನುವ ವೃದ್ಧನೊಬ್ಬ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಗಮನಕ್ಕೀದ್ದರು ಸಹ ಅಧಿಕಾರಿಗಳು ನಿಷ್ಕಾಳಜಿ ವಹಿಸುತ್ತಿದ್ದು. ನೀರು ನೀಡಲು ಯಾಕೆ ಹಿಂಜರೆಯುತ್ತಿದ್ದಾರೆ ಎನ್ನುವ ಪ್ರಶ್ನೇ ಜನಕ್ಕೆ ಕಾಡುತ್ತಿದೆ.

ಚುರಕಾಗಿ ಕೆಲಸ ಮಾಡಿ ನೀರು ಕೊಡಿ

ನೀರು ಇಲ್ಲದೇ ಕಳೆದ 4 ತಿಂಗಳಿನಿಂದ ದಲಿತರು ನಿತ್ಯ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದ್ದು, ನೀರು ನೀಡುವ ಭರವಸೆ ನೀಡಿ ಕಾಲಹರಣ ಮಾಡುತ್ತಿದ್ದು, ಸಗರ ಗ್ರಾಪಂ ಕೇಲ ಸಿಬ್ಬಂದಿಗಳು ನರಿ ಬುದ್ಧಿ ತೋರಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು ತಮ್ಮ ಜಾಣತನದಿಂದ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದ್ದರಿಂದ ಮೇಲಾಧಿಕಾರಿಗಳು ಈ ಕುರಿತು ಗಮನವಹಿಸಿ ಚುರುಕಾಗಿ ಕೆಲಸ ಮಾಡಿ ಶಾಶ್ವತ ನೀರು ಒದಗಿಸುವ ಕೆಲಸ ಮಾಡಬೇಕು ಎನ್ನುವುದು ಜನರ ಮನವಿಯಾಗಿದೆ.

ಇಂದು (ಬುಧವಾರ ಮೇ 07) ರಂದು ಪಿಡಿಓ ನೇತೃತ್ವದಲ್ಲಿ ಪಂಚಾಯತ್ ಸಿಬ್ಬಂದಿಗಳು ಸಭೆ ಮಾಡಿದ್ದು ಈಗಾಲಾದರೂ ದಲಿತರಿಗೆ ಶಾಶ್ವತ ನೀರಿನ ಪರಿಹಾರ ಸಿಗವುದೇ ಕಾದು ನೋಡಬೇಕಿದೆ.

Related