ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದವರೇ ಇಂದು ಗ್ಯಾರಂಟಿ ಮೊರೆ ಹೋಗಿದ್ದಾರೆ: ಡಿಸಿಎಂ

ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಡಿದವರೇ ಇಂದು ಗ್ಯಾರಂಟಿ ಮೊರೆ ಹೋಗಿದ್ದಾರೆ: ಡಿಸಿಎಂ

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯದ ಕಾಂಗ್ರೆಸ್‌ ನಾಯಕರುಗಳು ಇಂದು ದೆಹಲಿಯಲ್ಲಿರುವ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇನ್ನು ಪ್ರತಿಭಟನೆಗೂ ಮುನ್ನ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಿಜೆಪಿಯವರು ಭಾವನೆಗಳ ಮೇಲೆ ನಿರ್ದೇಶ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಾವು ನಮ್ಮ ರಾಜ್ಯದ ಜನತೆಯ ಬದುಕಿನ ಮೇಲೆ ಮತ್ತು ನಮ್ಮ ಚಿಂತನ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಕರ್ನಾಟಕ ರಾಜ್ಯದ ಗ್ಯಾರಂಟಿಗಳ ಬಗ್ಗೆ ವ್ಯಂಗ್ಯವಾಗಿ ಮಾತಾಡಿದವರು ಈಗ ಅವರೇ  ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿ ಜನರಿಗೆ ಗ್ಯಾರಂಟಿ ಭರವಸೆಗಳನ್ನು ನೀಡುತ್ತಾರೆ ಎಂದು ಪ್ರಶ್ನಿಸಿದರು.

ನಾವು ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಇರುವ ಹಣವನ್ನು ಕಳೆದುಕೊಂಡಿಲ್ಲ. ನಮ್ಮ ಸರಕಾರವನ್ನು ನಾವು ಹೇಗೆ ನಡೆಸಿಕೊಳ್ಳಬೇಕೆಂದು ನಮಗೆ ಗೊತ್ತಿದೆ. ನಮಗೆ ಬರಬೇಕಾದ ತೆರಿಗೆ ಹಣವನ್ನು ನಮಗೆ ನೀಡಿದರೆ ಸಾಕು. ನಮ್ಮ ಸರಕಾರವನ್ನು ನಾವು ಐದು ವರ್ಷ ಯಾವುದೇ ತೊಂದರೆ ಇಲ್ಲದಂಗೆ ನಡೆಸಿಕೊಂಡು ಹೋಗುತ್ತೇವೆ ಎಂದರು.

ಗುಜರಾತ್ ರಾಜ್ಯಕ್ಕೆ ಯಾವ ರೀತಿ ಅನುದಾನ ಕೊಟ್ಟಿದ್ದಾರೆ ಅದೇ ರೀತಿ ನಮ್ಮ ಕರ್ನಾಟಕಕ್ಕೂ ಅನುದಾನ ಕೊಡಲಿ ಎಂದು ನಾವು ಕೇಳುತ್ತಿದ್ದೇವೆ. ಯಾವ ರಾಜ್ಯಕ್ಕೆ ಎಷ್ಟಾದ್ರೂ ಕೊಡಲಿ ಆದರೆ ನಮ್ಮ ಕರ್ನಾಟಕ ರಾಜ್ಯದ ಜನತೆಯ ಮೇರೆಗೆ ನಮ್ಮ ತೆರಿಗೆ ನಮಗೆ ಕೊಟ್ಟರೆ ಸಾಕು ಎಂದು ಹೇಳಿದರು.

Related