ಹೈಕಮಾಂಡ್ ನಿರ್ಣಯಕ್ಕೆ ಸರ್ವರು ಬದ್ಧರಾಗಿರಬೇಕು

ಹೈಕಮಾಂಡ್ ನಿರ್ಣಯಕ್ಕೆ ಸರ್ವರು ಬದ್ಧರಾಗಿರಬೇಕು

ಕೊಲ್ಹಾರ:ಪಕ್ಷದ ಹಾಗೂ ವರಿಷ್ಠರ ತೀರ್ಮಾನಕ್ಕೆ ಸರ್ವರು ಬಧ್ಧರಾಗಿರಬೇಕು ಇದು ನಮ್ಮ ಬಿಜೆಪಿಯ ಸಂಸ್ಕೃತಿ ಎಂದು ಬಿಜೆಪಿ ಪಕ್ಷದ ಹಿರಿಯ ಮುಖಂಡ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಮನೆಗೆ ಭೇಟಿ ನೀಡಿ ತಮ್ಮ ಧರ್ಮಪತ್ನಿ ಅವರೊಂದಿಗೆ ಸನ್ಮಾನ ಸ್ವೀಕರಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಠಾಧಿಪತಿಗಳು ಉಪಮುಖ್ಯಮಂತ್ರಿ ಮಾಡುವಂತೆ ಹೇಳಿಕೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ನಿರ್ಣಯಕ್ಕೆ ಸರ್ವರು ಬದ್ಧರಾಗಿರಬೇಕಾಗುತ್ತದೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಾನು ಒತ್ತಡ ಹಾಕಿಲ್ಲ, ಸ್ವಾಮೀಜಿಗಳು, ಮಠಾಧಿಪತಿಗಳು ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಹೇಳಿಕೆ ನೀಡಿದ್ದಾರೆ ಅವರಿಗೆ ನಾನು ಋಣಿ ಎಂದರು.
ದೇಹಲಿಯಿಂದ ವರಿಷ್ಠರು ಬಂದಾಗ ಕುಂದು ಕೊರತೆ ಹೇಳಿಕೊಳ್ಳಲು ಅವಕಾಶ ನೀಡಲಾಗಿದ್ದು, ಕೇಂದ್ರ ನಾಯಕರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸದೆ ಈ ರೀತಿ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿ ಅಲ್ಲ, ಎಂದು ಹೇಳಿದರು.
ಪ.ಪಂ ಅಧ್ಯಕ್ಷ ವಿರುಪಾಕ್ಷಿ ಕೋಲಕಾರ, ಚಂದ್ರಶೇಖರ ಬೆಳ್ಳುಬ್ಬಿ ಇಸ್ಮಾಯಿಲ್ ತಹಸೀಲ್ದಾರ್ ಇಕ್ಬಾಲ್ ಮುಜಾವರ್ ಹುಚ್ಚಪ್ಪ ಬಾಟಿ, ಮಂಜುನಾಥ್ ಪುಂಡ್ಲಿಕ ಭಾಟಿ ತುಂಬರಮಟ್ಟಿ, ಶ್ರೀಶೇಲ ಗಿಡ್ಡಪ್ಪಗೋಳ, ಜಾಕೀರ ಸೌದಾಗರ ಸುಭಾಸ ಬಜಂತ್ರಿ ಇದ್ದರು.

Related