ರೈತರ ಪ್ರತಿಭಟನೆ ದುರದೃಷ್ಟಕರ; ಹೆಬ್ಬಾರ್

ರೈತರ ಪ್ರತಿಭಟನೆ ದುರದೃಷ್ಟಕರ; ಹೆಬ್ಬಾರ್

ಕಾರವಾರ : ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ರೀತಿ ಟ್ರಾಕ್ಟರ್‌ಗಳನ್ನು ತಂದು ತೊಂದರೆ ಕೊಡುತ್ತಿರುವುದು ಯಾವ ಸಂಘಟನೆಗೂ ಶೋಭೆ ತರುವಂಥದ್ದಲ್ಲ” ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಮಂಗಳವಾರ ಟ್ರಾಕ್ಟರ್ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ರೈತ ಪ್ರತಿಭಟನೆ ದುರದೃಷ್ಟಕರ. ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕಾಗಿತ್ತು. “ರೈತರ ಪ್ರತಿಭಟನೆಯಲ್ಲಿ ಏನಾದರು ರಾಜಕೀಯ ಅಡಗಿದೆಯೋ? ಎಂಬ ಬಗ್ಗೆ ತನಿಖೆ ಮಾಡಬೇಕಾದ ಅವಶ್ಯಕತೆ ಇದೆ. ರೈತರು ರಾಜಕೀಯಕ್ಕೆ ಒಳಗಾಗಬಾರದು ಎಂಬುದೇ ನನ್ನ ವಿನಂತಿ. ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ. ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲೂ 40 ಲಕ್ಷ ರೈತರಿಗೆ ಪರಿಹಾರಧನ ಕೊಟ್ಟಿದ್ದೇವೆ. ನಾವು ಯಾವುದೇ ರೈತರನ್ನೂ ಕಡೆಗಣಿಸುವಂಥ ಕಾರ್ಯ ಮಾಡಿಲ್ಲ” ಎಂದು ತಿಳಿಸಿದರು.
“ಶೂನ್ಯ ಬಡ್ಡಿದರದಲ್ಲಿ ಸಾಲ, 5 ರೂ. ನಂತೆ ಹಾಲಿಗೆ ಸಬ್ಸಿಡಿ, ಭತ್ತಕ್ಕೆ 1888 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲು ಉತ್ತರ ಕನ್ನಡದ ನಾಲ್ಕು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ಫಸಲು ಹಾಳಾದಾಗೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಸಚಿವರು ವಿವರಿಸಿದರು.

ರೈತರ 200 ಎಕರೆಯವರೆಗಿನ ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ಅನುಮತಿ ಬೇಕಾಗಿಲ್ಲ ಎಂಬ ಕಾಯ್ದೆ ಜಾರಿಗೆ ತರಲಾಗಿದೆ. ಆದಾಯ ತೆರಿಗೆಗೆ ಇದ್ದ 20 ಲಕ್ಷ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ತಮ್ಮ ಆಸ್ತಿಗಳೆಲ್ಲ ಹೋಗಿಬಿಡಬಹುದೆಂಬ ದುಗುಡ ಅವರಲ್ಲಿದೆ” ಎಂದು ಶಿವರಾಂ ಹೆಬ್ಬಾರ್ ಹೇಳಿದರು.

ನಾವು ತಂದಿರುವ ಕಾನೂನು ರೈತ ಪರವಾದ ಕಾನೂನು ಎಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ರೈತ ಪರವಾಗಿಯೇ ಕೆಲಸ ಮಾಡುತ್ತೇವೆ” ಎಂದರು.

Related