ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಗಂಡ ಕಾರ್ತಿಕ್ ಕೊಲೆ ಮಾಡಿಸಿದ ಆರೋಪದ ಮೇಲೆ ರಂಜಿತಾ, ಅವಳ ಪ್ರಿಯಕರ ಸಂಜೀವ್ನ್ನು ಗುರುವಾರ ಬಂಧಿಸಿದ್ದಾಗಿ ಕೆಂಪೇಗೌಡ ನಗರ ಪೊಲೀಸರು ತಿಳಿಸಿದರು. ರಂಜಿತಾ ಐದು ವರ್ಷಗಳ ಹಿಂದೆ ಆಟೋ ಚಾಲಕ ಕಾರ್ತಿಕ್ ಪ್ರೀತಿಸಿ ಮದುವೆಯಾಗಿದ್ದಳು. ನಂತರ ಗಂಡನ್ನ ಸ್ನೇಹಿತ ಸಂಜೀವ್ನ್ನು ಪ್ರೀತಿಮಾಡಿದಳು. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರ್ತಿಕ್ನ್ನು ಮುಗಿಸಲು ತಿರ್ಮಾನಿಸಿದ್ದರು. ಕೆಲವು ದಿನಗಳ ಹಿಂದೆ ಸಂಜೀವ್, ಕಾರ್ತಿಕ್ಗೆ ಕಂಠಪೂರ್ತಿ ಕುಡಿಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ವೃಷಭವತಿ ನದಿಗೆ ಮೂಟೆಕಟ್ಟಿ ಎಸೆದರು. ನಂತರ ನನ್ನ ಗಂಡ ಮನೆಗೆ ಬಂದಿಲ್ಲ ಹುಡುಕಿಕೊಡಿ ಎಂದು ರಂಜಿತಾ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ವಾಸ್ತವಂಶ ಬೆಳೆಕಿಗೆ ಬಂತು. ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಎಂದು ಪೊಲೀಸರು ತಿಳಿಸಿದರು.