ನಾರಿ ಮುನಿದರೆ ಮಾರಿ

  • In State
  • August 6, 2021
  • 482 Views
ನಾರಿ ಮುನಿದರೆ ಮಾರಿ

ಮುಂಡಗೋಡ: ನಾರಿ ಮುನಿದರೆ ಮಾರಿ ಆಗುತ್ತೆ ಎಂದು ಮಾತ್ತೊಮ್ಮೆ ಸಾಬೀತಾಗಿದೆ. ಇಂದೂರ ಗ್ರಾಮದ ಹೊರ ವಲಯದಲ್ಲಿ ಗುರುವಾರ ಗೀತಾ ದೊಡ್ಡಮನಿ ಎಂದಿನಂತೆ ಬೆಳಿಗೆ ಗದ್ದೆ ಕೆಲಸಕ್ಕೆ ತೆರಳಿದ್ದಾಗ ಚಿರತೆಯೊಂದು ದಾಳಿ ನಡೆಸಿತು. ಮುಖ, ಮುಂತಾದ ಭಾಗಕ್ಕೆ ಪರಚಿದ್ದೆ. ಇದರ ನಡುವೆಯೂ ಅವಳು ಧೈರ್ಯ ಮೆರೆದು ಕುಡಗೋಲನ್ನು ಚಿರತೆಯ ಮೇಲೆ ಬೀಸಿದಳು. ಇದರಿಂದ ಭಯಗೊಂಡ ಚಿರತೆ ಅರಣ್ಯ ಪ್ರದೇಶದತ್ತ ಓಡಿ ಹೋಗಿದೆ. ಗೀತಾ ದೊಡ್ಡಮನಿಗೆ ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

Related