ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲದಲ್ಲಿ ಪಂಚಮಸಾಲಿ ಸಮುದಾಯದಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿದ್ದಂತ ಮಠಾಧೀಶರನ್ನು ಸಿಎಂ ಸೂಚನೆಯ ಮೇರೆಗೆ ಸಚಿವ ಸಿ.ಸಿ ಪಾಟೀಲ್ ಹಾಗೂ ನಿರಾಣಿ ನೇತೃತ್ವದ ನಿಯೋಗ ಭೇಟಿ ಮಾಡಿತು.
ಸಿಎಂ ಸೂಚನೆಯ ಮೇರೆಗೆ 2ಎ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಮಠಾಧೀಶರು ನಡೆಸುತ್ತಿರುವ ಪಾದಯಾತ್ರೆ ಸಂಧಾನಕ್ಕೆ ಸಚಿವ ಸಿಸಿ ಪಾಟೀಲ್, ನಿರಾಣಿ ನೇತೃತ್ವದ ನಿಯೋಗ ಪಂಚಮಸಾಲಿ ಶ್ರೀಗಳನ್ನು ಭೇಟಿ ಮಾಡಲು ಕಳುಹಿಸಿದ್ದರು.
ಈ ವೇಳೆ ಸನ್ಮಾನ ಮಾಡಿದಂತ ಸಚಿವರ ವಿರುದ್ಧವೇ ಹಾರ ಕಿತ್ತುಹಾಕಿ ಅಸಮಾಧಾವನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೊರ ಹಾಕಿದ್ದಾರೆ.
ಈ ಮೂಲಕ ಸಚಿವರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಇದೇ ಸಂದರ್ಭದಲ್ಲಿ ರೊಚ್ಚಿಗೆದ್ದಿದ್ದಂತ ವಿಜಯಾನಂದ ಕಾಶಪ್ಪನವರನ್ನು ಸಮಾಧಾನಿಸಲು ಸ್ವಾಮೀಜಿಗಳು ಹರಸಾಹಸ ಪಡುವಂತಾಯಿತ್ತು.