ಮಳೆಯಲ್ಲೇ ಹೊತ್ತಿ ಉರಿದ ಕಾರು..!

  • In Crime
  • July 12, 2022
  • 212 Views
ಮಳೆಯಲ್ಲೇ ಹೊತ್ತಿ ಉರಿದ ಕಾರು..!

ಚಿಕ್ಕಮಗಳೂರು, ಜು 12: ಮಳೆಯ ಮಧ್ಯೆಯೂ ಕಾರೊಂದು ಚಾರ್ಮಾಡಿ ಘಾಟ್ನಲ್ಲಿ ಹೊತ್ತಿ ಉರಿದಿದೆ.

ಮೂಡಿಗೆರೆ ತಾಲೂಕಿನ ಜೇನ್ ಕಲ್ ದೇವಸ್ಥಾನದ ಬಳಿ ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಕುಟುಂಬವೊಂದು ಕಾರಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿತ್ತು.

ಚಾರ್ಮಾಡಿ ಘಾಟ್ ನಲ್ಲಿ ತೆರಳುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ನಾಲ್ವರು ಕಾರಿನಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ.

Related