ಆರೋಪಿ ಅಂದರ್

ಆರೋಪಿ ಅಂದರ್

ಚಿಕ್ಕಮಗಳೂರು,ಫೆ. 6 : ಜಮೀನಿನಲ್ಲಿ ಕೆಲಸ ಮಾಡುವಾಗ ಎಲೆ ಅಡಿಕೆ ಕೇಳುವ ನೆಪದಲ್ಲಿ 70 ವರ್ಷದ ವೃದ್ಧೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ 70 ವರ್ಷಮ್ಮ ಜಯಮ್ಮ ಎಂಬವರ ಬಳಿ ಎಲೆ-ಅಡಿಕೆ ಕೇಳುವ ವೇಳೆ 28 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದನು. ಜಯಮ್ಮ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಭೂತನಹಳ್ಳಿ ಗೋವಿಂದ ಎಂಬವನು ಆಕೆಯ ಬಳಿ ಎಲೆ ಬೇಕು ಎಂದು ಕೇಳಿದ್ದಾನೆ.

ವೃದ್ಧೆ ಎಲೆ-ಅಡಿಕೆ ಹುಡುಕುತ್ತಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಸರವನ್ನು ನೋಡಿ ಕಣ್ಣಿಗೆ ಕಾರದ ಪುಡಿ ಎರಚಿ ಸರವನ್ನು ಕದ್ದು ಪರಾರಿಯಾಗಿದ್ದನು.
ಕೂಡಲೇ ಜಯಮ್ಮ ಅಜ್ಜಂಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸ್ಥಳೀಯರ ಮಾಹಿತಿ ಮೆರೆಗೆ ಆರೋಪಿ ಗೋವಿಂದನನ್ನು ಅಜ್ಜಂಪುರದ ಬೇಗೂರು ಹಳ್ಳದ ಬಳಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆರೋಪಿಯಿಂದ ಒಂದು ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದು, ಆರೋಪಿ ಗೋವಿಂದನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Related