ತೇಗೂರು ಕೆರೆಗೆ ಬಾಗೀನ

  • In State
  • August 10, 2021
  • 517 Views
ತೇಗೂರು ಕೆರೆಗೆ ಬಾಗೀನ

ಧಾರವಾಡ : ತಾಲೂಕಿನ ತೇಗೂರು ಗ್ರಾಮದ ಕೆರೆಗೆ ಶಾಸಕ ಅಮೃತ ದೇಸಾಯಿ ಸೋಮವಾರ ಬಾಗೀನ ಅರ್ಪಿಸಿದರು. ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ್ದು “ಕೆರೆಗಳು ಗ್ರಾಮೀಣ ಜನರ ಜೀವನಾಡಿ, ಕೆರೆಗಳನ್ನು ಸ್ವಚ್ಛ, ಶುದ್ಧವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೆರೆಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿರುವ ಸೇವಾ ಕಾರ್ಯ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ” ಎಂದರು.  ಗ್ರಾ. ಪಂ. ಅಧ್ಯಕ್ಷ ಬಸಪ್ಪ ಹುಲಮನಿ, ದುಗ್ಗೇಗೌಡ, ವಸಂತ ಅರ್ಕಾಚಾರ, ಮಡಿವಾಳಪ್ಪ ಬೆಳವಲದ, ಲೀಲಾವತಿ ಓಲೆಕಾರ ಇನ್ನಿತರರಿದ್ದರು.

Related