ನಾಯಕರ ಬಗ್ಗೆ ಮಾತನಾಡುವುದು ಸರಿಯಲ್ಲ: ಶೋಭಾ

ನಾಯಕರ ಬಗ್ಗೆ ಮಾತನಾಡುವುದು ಸರಿಯಲ್ಲ: ಶೋಭಾ

ಚಿಕ್ಕಮಗಳೂರು: ‘ನಮ್ಮ ನಾಯಕರೆಲ್ಲರು ಗೌರವಾನ್ವಿತರು. ಯಾವುದೇ ಪಕ್ಷ, ಜಾತಿ, ಧರ್ಮ ಭೇದ ಇಲ್ಲ. ಯಾರು ಯಾರ ಬಗ್ಗೆಯೂ ಮಾತನಾಡಬಾರದು’ ಎಂದು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

‘ನಾಯಕರು ಅವರವರ ಕಾಲಘಟ್ಟದಲ್ಲಿ ದೇಶಕ್ಕಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಉತ್ತರಿಸಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಅವರು ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ರಂಭಾಪುರಿಶ್ರೀ ಅವರ ಆಶೀರ್ವಾದ ಪಡೆದರು.

Related