ರಂಜಾನ್ ಮಾಸದ ಅಂಗವಾಗಿ ಚಾಮರಾಜಪೇಟೆಯ ಆರಿಫ್ ಪಾಷ ಫೌಂಡೇಶನ್ ವತಿಯಿಂದ ಎರಡನೆ ಹಂತದಲ್ಲಿ ಸುಮಾರು ೭೦೦೦ ಕುಟುಂಬಗಳಿಗೆ ರೇಷನ್ ಕಿಟ್ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚಾಲನೆ ನೀಡಿದರು.
ಜೆಡಿಎಸ್ ಯುವ ನಾಯಕ ಹಾಗೂ ಪಾದರಾಯನಪುರ ವಾರ್ಡ್ನ ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್ ಪಾಷ ನೇತೃತ್ವದಲ್ಲಿ ಜೆ.ಜೆ.ನಗರದ ಸಂಗಮ್ ಸರ್ಕಲ್ನಲ್ಲಿರುವ ಬಿಬಿಎಂಪಿ ಹೈಸ್ಕೂಲ್ ಆವರಣದಲ್ಲಿ ರೇಷನ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ನಾಯಕ ಆರಿಫ್ ಪಾಷ, ಜೆಡಿಎಸ್ ಯುವ ಮುಖಂಡ ಇರ್ಫಾನ್ ಪಾಷ, ಮೌಲಾನ ಪಿ.ಎಂ.ಮುಝಮ್ಮಿಲ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.