ಮೋದಿ ಕಾಳಿಂಗ ಸರ್ಪ ಎಂದ ಸುಧಾಕರ್

ಮೋದಿ ಕಾಳಿಂಗ ಸರ್ಪ ಎಂದ ಸುಧಾಕರ್

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ವಿಧಾನಸಭಾ ಚುನಾವಣೆಯ ಜಿದ್ದಾಜಿದ್ದಿ ನಡೆದಿದ್ದು ಒಂದು ಪಕ್ಷದವರು ಇನ್ನೊಂದು ಪಕ್ಷದವರ ಮೇಲೆ ವಿಷ ಕಾರುತ್ತಿದ್ದಾರೆ.

ಹೌದು, ನರೇಂದ್ರ ಮೋದಿ ವಿಷಕಾರಿ ಹಾವಿದ್ದಂತೆ ಎಂದು ಟೀಕಿಸಿದ್ದಖರ್ಗೆ ವಿರುದ್ಧ ಬಿಜೆಪಿ ಮುಗಿಬಿದ್ದಿತ್ತು. ಇದಾದ ಬಳಿಕ ಖರ್ಗೆ ಕ್ಷಮೆಯಾಚಿಸಿದ್ದರು. ಆದರೆ ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ಚುನಾವಣಾ ಕಣಕ್ಕೆ ಧುಮುಕಿದೆ. ಇದೀಗ ಸಚಿವ ಸುಧಾಕರ್ ಮೋದಿ ವಿಷ ಸರ್ಪ ಅಲ್ಲ ಅವರು ಕಾಳಿಂಗ ಸರ್ಪ ಎಂದಿದ್ದಾರೆ.

ಇಂದು ಚಿಕ್ಕಬಳ್ಳಾಪುರದ ಬಾಲರೆಡ್ಡಿಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಚಿವ ಡಾ ಕೆ ಸುಧಾಕರ್, ಖರ್ಗೆಯವರು ಮೊದಿಯನ್ನ ವಿಷ ಸರ್ಪ ಅಂತ ಕರೆದರು. ಆದರೆ ಮೊದಿ ವಿಷ ಸರ್ಪ ಅಲ್ಲ ಅವರು ಕಾಳಿಂಗ ಸರ್ಪ. ಮೋದಿಯನ್ನ ವಿಷ ಸರ್ಪ ಅಂತ ಕರೆಯಲು ಅವರಿಗೆ ನಾಚಿಕೆಯಾಗಲ್ವಾ ಎಂದು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಸುಧಾಕರ್ ಗುಡುಗಿದರು.

Related