ಗ್ರಾಮಕ್ಕೆ ಬಸ್ ಬಿಡಲು ವಿದ್ಯಾರ್ಥಿಗಳಿಂದ ಆಗ್ರಹ

ಗ್ರಾಮಕ್ಕೆ ಬಸ್ ಬಿಡಲು ವಿದ್ಯಾರ್ಥಿಗಳಿಂದ ಆಗ್ರಹ

ಜೇವರ್ಗಿ : ತಾಲ್ಲೂಕು ಕೇಂದ್ರದಿಂದ 45 ಕಿ.ಮೀ ಅಂತರದಲ್ಲಿರುವ ಗ್ರಾಮ ರಂಜಣಗಿ ಗ್ರಾಮಕ್ಕೆ ಬಸ್ ಓಡಿಸಲು ವಿದ್ಯಾರ್ಥಿಗಳು ತಹಶೀಲ್ದಾರ್ ಸೇರಿದಂತೆ ಜೇವರ್ಗಿ ಬಸ್ ಘಟಕದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಇಲ್ಲಿನ ಗ್ರಾಮದಿಂದ ದಿನಾಲು ನೂರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ಶಾಲಾ-ಕಾಲೇಜುಗಳಿಗೆ ಜೇವರ್ಗಿ ಪಟ್ಟಣಕ್ಕೆ ಬರುತ್ತಿದ್ದಾರೆ. ಅಲ್ಲದೆ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ತಾಲ್ಲೂಕು ಕೇಂದ್ರಕ್ಕೆ ಬರುವ ಅನಿವಾರ್ಯತೆ ಇದೆ. ಅಲ್ಲದೆ ಮಹಿಳೆಯರು ಸೇರಿದಂತೆ ವೃದ್ಧರೂ ಸಹ ವೈದ್ಯಕೀಯ ಸೌಲಭ್ಯ ಪಡೆಯಲು ಚಿಕಿತ್ಸೆಯನ್ನು ಪಡೆಯಲು ತಾಲ್ಲೂಕು ಆಸ್ಪತ್ರೆಗೆ ಆಗಮಿಸುತ್ತಿದ್ದು, ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

ಈ ಕುರಿತಂತೆ ಮನವಿ ಪತ್ರವನ್ನು ಸಲ್ಲಿಸಿದ ಗ್ರಾಮದ ವಿದ್ಯಾರ್ಥಿಗಳು ರವಿಕುಮಾರ್, ತೌಸಿಫ್, ವಿಜಯಕುಮಾರ್, ಮಹಾಂತೇಶ್ ರಾಥೋಡ್, ಶರಣ್ ಕುಮಾರ್, ಸಾಹೇಬಗೌಡ, ವಿಶಾಲ್ ಸೇರಿದಂತೆ ಇತರರು ಮನವಿ ಪತ್ರವನ್ನು ತಹಶೀಲ್ದಾರರು, ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಕೂಡಲೇ ಬಸ್ ಸಂಚಾರ ಆರಂಭಿಸಬೇಕೆಂದು ಮನವಿ ಮಾಡಿದ್ದಾರೆ.

Related